Uncategorized

ಕಾಪು : ಪಾದೂರು ಐ.ಎಸ್.ಪಿ.ಆರ್.ಎಲ್ ಖಾಸಗೀಕರಣದ ವಿರುದ್ಧ ಬೃಹತ್‌ ಜನಾಂದೋಲನ ಯಾತ್ರೆ : ಸೊರಕೆ

0

ವರದಿ: ಶಫೀ ಉಚ್ಚಿಲ

ಕಾಪು : ಪಾದೂರು ಐ.ಎಸ್.ಪಿ.ಆರ್.ಎಲ್ ಯೋಜನೆಯನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಶಿರ್ವದಿಂದ ಮಜೂರಿನವರೆಗೆ ಬೃಹತ್ ಜನಾಂದೋಲನ ಯಾತ್ರೆಯನ್ನು ನಡೆಸಲಾಗುವುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಮಂಗಳವಾರ ಕಾಪು ರಾಜೀವ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ದೇಶದ ಆತಂಕರಿಕ ಭದ್ರತೆಗಾಗಿ ಕೇಂದ್ರ ರಕ್ಷಣಾ ಇಲಾಖೆಯ ಮೂಲಕ ಅನುಷ್ಠಾನಗೊಂಡಿರುವ ಪಾದೂರಿನ ಕಚ್ಚಾ ತೈಲ ಸಂಗ್ರಹಣಾ ಘಟಕವನ್ನು ಇದೀಗ ಪ್ರತ್ಯೇಕಿಸಿ, ಪೆಟ್ರೋಲಿಯಂ ಇಲಾಖೆಗೆ ವಹಿಸಿರುವುದಲ್ಲದೆ,
ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡುತ್ತಿರುವುದು ಖಂಡನೀಯವಾಗಿದೆ ಎಂದರು.

Advertisement. Scroll to continue reading.

ದೇಶದ ರಕ್ಷಣೆ ಮತ್ತು ಭದ್ರತೆಯ ದೃಷ್ಠಿಯಿಂದ ಐಎಸ್‌ಪಿಆರ್ ಎಲ್ ಯೋಜನೆಯನ್ನು ಖಾಸಗಿಯವರಿಗೆ ಗುತ್ತಿಗೆಯಾಧಾರದಲ್ಲಿ ನೀಡುವ ಮೂಲಕ ಸ್ಥಳೀಯರ ತ್ಯಾಗಕ್ಕೆ ಬೆಲೆಯಿಲ್ಲದಂತಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ವೇಳೆ ಕನಿಷ್ಟ ಮೌಲ್ಯದ ಪರಿಹಾರವನ್ನು ನೀಡಿದ್ದರೂ ಅದನ್ನು ವಿರೋಧಿಸಿ ಯೋಜನೆಯನ್ನು ಬೆಂಬಲಿಸಿದ ಜನರ ಉದಾರತೆಯ ಮನೋಭಾವವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ದುರ್ಬಳಕೆ ಮಾಡಿಕೊಂಡಿದ್ದು,  ಇದನ್ನು ಖಂಡಿಸಿ ಪ್ರತಿಭಟನೆಯ ರೂಪದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅವಘಡದ ಭೀತಿ

ಪ್ರಥಮ ಹಂತದ ಯೋಜನೆಯ ವೇಳೆ ಸ್ಥಳೀಯರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರು. ಯೋಜನಾ ಸ್ಥಾವರದೊಳಗೆ ಪರಿಣಿತ ತಾಂತ್ರಿಕ ಸಿಬಂದಿಗಳ ಕೊರತೆಯಿಂದ ಸಮರ್ಪಕ ನಿರ್ವಹಣೆಯಾಗದೇ ಅವಘಡದ ಭೀತಿ ಎದುರಾಗಿದೆ. ಖಾಸಗಿಯವರು ವಹಿಸಿಕೊಂಡಲ್ಲಿ ಅವರಲ್ಲಿಯೂ ಪರಿಣತರ ಕೊರತೆಯಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುವ ಸಾಧ್ಯತೆಗಳಿವೆ.
ಇದೀಗ ಎರಡನೇ ಹಂತದ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕಾಗಿ ಜಾರಿಯಲ್ಲಿರುವ ನೂತನ ನಿಯಮಾವಳಿಗಳನ್ನು ಗಾಳಿಗೆ ತೂರಿ, ಜನ ವಸತಿ ಪ್ರದೇಶದಲ್ಲಿ ಭೂಸ್ವಾಧೀನ ನಡೆಸಲಾಗುತ್ತಿದೆ. ಶಿರ್ವ ಹಾಗೂ ಕಾಪುವಿನಲ್ಲಿರುವ ಭೂಮಿ ಮೌಲ್ಯಕ್ಕಿಂತ ಕಡಿಮೆ ನೀಡಿ ಭೂ ಸ್ವಾದೀನ ನಡೆಯುತ್ತಿದೆ. ಎರಡನೇ ಹಂತದ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ವೇಳೆ ಮೂರು ಪಟ್ಟು ಹೆಚ್ಚಳ ಮೌಲ್ಯವನ್ನು ನೀಡುವಂತೆ ಸ್ಥಳೀಯರಿಗೆ ಉದ್ಯೋಗದ ಅವಕಾಶಗಳನ್ನು ನೀಡುವಂತೆ ಒತ್ತಾಯಿಸಲಾಗುವುದು ಎಂದರು.

ಪ್ರಥಮ ಹಂತದ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಉತ್ತಮ, ಭೂ ಮೌಲ್ಯ, ಪಾದೂರು-ತೋಕುರು ನಡುವಿನ ಪೈಪ್‌ಲೈನ್ ಯೋಜನೆಗಾಗಿ ಭೂಮಿ ಕಳೆದಕೊಂಡವರಿಗೆ, ಹೈಟೆನ್ಶನ್ ವಿದ್ಯುತ್ ಮಾರ್ಗ ಹಾದು ಹೋದ ಪ್ರದೇಶದಲ್ಲಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಬೇಡಿಕೆ, ಪೈಪ್‌ಲೈನ್ ಕಾಮಗಾರಿ ವೇಳೆ ಬಂಡೆ ಸ್ಪೋಟದಿಂದಾಗಿ ಅಪಾಯಕ್ಕೊಳಗಾದ ಮನೆಗಳವರಿಗೆ ಗರಿಷ್ಠ ಪರಿಹಾರ ಧನ ಒದಗಿಸುವಿಕೆ ಬಗ್ಗೆ ಜನಜಾಗೃತಿ ಸಮಿಯಿ ನಡೆಸಿರುವ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬೆಂಬಲ ನೀಡಿತ್ತು. ಈಗಲೂ ಅದೇ ಮಾದರಿಯ ಬೆಂಬಲ ನೀಡಲು ನಾವು ಬದ್ಧರಿದ್ದೇವೆ ಎಂದರು.

ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾದಿಕ್ ದೀನಾರ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸಂಶುದ್ದೀನ್ ಶೇಖ್, ಕಾಪು ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಹರೀಶ್ ನಾಯಕ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ಸುವರ್ಣ, ನಾಗಭೂಷಣ ರಾವ್ ಉಪಸ್ಥಿತರಿದ್ದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com