ವರದಿ : ಬಿ.ಎಸ್.ಆಚಾರ್ಯ
ಉಡುಪಿ : ಕೊರೋನಾರ್ಭಟ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣ ಅತೀ ಅಗತ್ಯವಾಗಿದ್ದು, ಖುದ್ದು ಜಿಲ್ಲಾಧಿಕಾರಿಯವರೇ ಫೀಲ್ಡ್ ಗೆ ಇಳಿದಿದ್ದಾರೆ. ಇಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಬ್ರಹ್ಮಾವರ ತಾಲೂಕಿಗೆ ಭೇಟಿ ನೀಡಿ, ಪಾಸಿಟಿವ್ ಬಂದ ಮನೆಯನ್ನು ಸೀಲ್ ಡೌನ್ ಮಾಡಿಸಿದರು. ಚಾಂತಾರು ಗ್ರಾಮದ ಪಾಸಿಟಿವ್ ಬಂದ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದರು.
ಕೋವಿಡ್ ನಿಯಮ ಪಾಲಿಸದವರ ಮೇಲೆ ಕೇಸು
ಬ್ರಹ್ಮಾವರದಲ್ಲಿ ಕೋವಿಡ್_19 ರ ಸುರಕ್ಷಿತಾ ನಿಯಮಗಳನ್ನು ಸಾರ್ವಜನಿಕರು ಪಾಲಿಸುತ್ತಿದ್ದಾರಾ? ಎಂದು ಪರಿಶೀಲಿಸಿದರು ಹಾಗೂ ಅನಾವಶ್ಯಕವಾಗಿ ತಿರುಗಾಡುತ್ತಿರುವ ವಾಹನಗಳನ್ನು ಸೀಜ್ ಮಾಡುವಂತೆ ತಿಳಿಸಿದರು. ಕೆಲವೆಡೆ ಲಾಕ್ ಡೌನ್ ನಿಯಮ ಮೀರಿ ಅಂಗಡಿ ಮುಂಗಟ್ಟುಗಳನ್ನು ತೆರೆದಿಟ್ಟವರ ಮೇಲೆ, ಅನಾವಶ್ಯಕವಾಗಿ ತಿರುಗಾಡುತ್ತಿದ್ದ ವಾಹನ ಸವಾರರ ಮೇಲೆ ಕೇಸು ದಾಖಲಿಸಿದರು.
Advertisement. Scroll to continue reading.
ಎಸ್ ಐ ಗುರುನಾಥ್ ಬಿ ಹಾದಿಮನೆ, ತಹಶೀಲ್ದಾರ ಕಿರಣ್ ಗೌರಯ್ಯ, ಕಂದಾಯ ನೀರೀಕ್ಷಕಿ ಲಕ್ಷ್ಮಿ ನಾರಾಯಣ ಭಟ್, ಚಾಂತಾರು ಪಿಡಿಓ, ಗ್ರಾಮಕರಣಿಕರು ಉಪಸ್ಥಿತರಿದ್ದರು.