ವರದಿ : ವೀರಭದ್ರ ಗಾಣಿಗ
ಉಡುಪಿ : ಕರಾವಳಿಯಲ್ಲಿ ಒಂಟೆಗಳಿಗೂ ಕೊರೋನಾ ಲಾಕ್ ಡೌನ್ ಪರಿಣಾಮ ಬೀರಿದೆ. ದೇವಾಲಯಗಳಿಗೆ ಭಕ್ತರಿಗೆ ಅವಕಾಶವಿಲ್ಲ. ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರುವಂತಿಲ್ಲ. ಹಾಗಾಗಿ ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಒಂಟೆ ಸವಾರಿಗೂ ಹೊಡೆತ ಬಿದ್ದಿದೆ. ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಿಂದ ಒಂಟೆಗಳು ನಡೆದು ಬರುತ್ತಿರುವ ದೃಶ್ಯ ಕಂಡು ಬಂದಿದೆ.
ಮುರುಡೇಶ್ವರ ಬೀಚ್ ನಲ್ಲಿ ಪ್ರವಾಸಿಗರನ್ನೆ ನಂಬಿ ಬದುಕು ಕಂಡಿದ್ದ ಒಂಟೆ ಮಾಲೀಕರು ಕಂಗಾಲಾಗಿದ್ದಾರೆ. ಮುರುಡೇಶ್ವರ ದಿಂದ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ನಡೆದು ಸಾಗುತ್ತಿರುವ ಒಂಟೆಗಳು ಉಡುಪಿ ಬೀಚ್ ಗೆ ತೆರಳುವ ಉದ್ದೇಶಕ್ಕೆ ನಡೆದು ಸಾಗುತ್ತಿವೆ.
ಬೈಂದೂರು ಅರೆಹೊಳೆ ಬಳಿ ಒಂಟೆಗಳ ಕಷ್ಟಕ್ಕೆ ಮರುಗಿದ ಆಕಳಬೈಲು ದೇವಾಡಿಗರ ಸಮಾಜ ತಂಡ ಒಂಟೆಗಳಿಗೆ ಕಲ್ಲಂಗಡಿ ಮತ್ತಿತರ ಆಹಾರ ನೀಡಿ ಮಾನವೀಯತೆ ಮೇರೆದಿದ್ದಾರೆ.
Advertisement. Scroll to continue reading.