ವರದಿ: ಶಫೀ ಉಚ್ಚಿಲ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರಬಲವಾಗಿ ಕಾರ್ಯನಿರ್ವಹಿಸುವ ಪಾದೂರಿನ ಐಎಸ್ಪಿಆರ್ ಎಲ್ ಹಾಗೂ ಪಡುಬಿದ್ರಿ ನಂದಿಕೂರಿನ ಯುಪಿಸಿಎಲ್ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕೆಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಬಂಧ ಪಟ್ಟ ಕೇಂದ್ರ ಹಾಗೂ ರಾಜ್ಯ ಸಚಿವರಿಗೆ ಒತ್ತಡ ಹಾಕಲಾಗುವುದು ಮತ್ತು ಸ್ಥಳೀಯರಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಉದ್ಯೋಗ ನೀಡಲು ಆಗ್ರಹಿಸಲಾಗುವುದು ಎಂದರು.
Advertisement. Scroll to continue reading.