Uncategorized

ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯಿಲ್ಲ; ನಾವೆಲ್ಲ ಒಂದಾಗಿ ಕೆಲಸ ಮಾಡುತ್ತೇವೆ – ಸಚಿವ ಕೋಟ ಶ್ರೀನಿವಾಸ ಪೂಜಾರಿ

0

ವರದಿ : ದಿನೇಶ್ ರಾಯಪ್ಪನಮಠ

ಬೈಂದೂರು : ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯಿಲ್ಲ; ನಾವೆಲ್ಲ ಒಂದಾಗಿ ಕೆಲಸ ಮಾಡುತ್ತೇವೆ. ಯಡಿಯೂರಪ್ಪ ರವರು ಅತ್ಯಂತ ಸಮರ್ಥವಾಗಿ, ಇಡೀ ಕರ್ನಾಟಕ ರಾಜ್ಯ ಮೆಚ್ಚುವಂತೆ, ಎಲ್ಲಾ ರಾಜಕಾರಣಿಗಳು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಒಟ್ಟಾಗಿ, ಒಂದಾಗಿ ನಾವಿರುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದು, ಈ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲಿದ್ದಾರೆ ಎಂಬ ಗೊಂದಲಕ್ಕೆ ಉತ್ತರ ನೀಡಿದ್ದಾರೆ. ಬೈಂದೂರಿನಲ್ಲಿ ಗ್ರಾ.ಪಂ. ಕೋವಿಡ್ ನಿರ್ವಹಣಾ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಮುಖ್ಯ ಮಂತ್ರಿಗಳು ನೀಡುವ ಕಾರ್ಯ ಸೂಚಿ, ಅವರ ಚಟುವಟಿಕೆ, ಮಾರ್ಗಸೂಚಿ, ಆದೇಶವನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ಮೂಲಕ ಕೊರೋನಾ ಮುಕ್ತ ಕರ್ನಾಟಕ ಮಾಡಲು ಯಡಿಯೂರಪ್ಪರವರ ನೇತೃತ್ವದಲ್ಲಿ ನಾವೆಲ್ಲ ಒಟ್ಟಾಗಿ, ಒಂದಾಗಿ ಕೆಲಸ ಮಾಡಲು ತೀರ್ಮಾನಿಸಿದ್ದೇವೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎಂದರು.

Advertisement. Scroll to continue reading.

ಡಯಾಲಿಸೀಸ್ ಸೆಂಟರ್ ಗೆ ಸ್ಥಳಾವಕಾಶದ ಕೊರತೆ

ಕೊಲ್ಲೂರು ದೇವಸ್ಥಾನದಿಂದ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಡಯಾಲಿಸಿಸ್ ಸೆಂಟರ್ ಮಾಡುವ ಉದ್ದೇಶವಿತ್ತು. ಆದರೆ, ನಾನು ಸ್ಥಳ ಪರಿಶೀಲನೆ ಹೋಗಿದ್ದು, ಅಲ್ಲಿ ಡಯಾಲಿಸೀಸ್ ಸೆಂಟರ್ ತೆರೆಯಲು ಸ್ಥಳದ ಅವಕಾಶದ ಕೊರತೆ ಇದೆ. ಅದಕ್ಕೆ ಬೇಕಾದ ಪೂರಕವಾದ ವ್ಯವಸ್ಥೆ ಮಾಡಲು ಸ್ಥಳವಿಲ್ಲ. ಈ ಬಗ್ಗೆ ಡಿ ಹೆಚ್ ಓ ಬಳಿ ಮಾತನಾಡಿದ್ದೇನೆ. ತಾಲೂಕು ಆಸ್ಪತ್ರೆಯಾಗಿ ಪರಿವರ್ತನೆ ಮಾಡಲು ಹೊಸ ಕಟ್ಟಡವಾಗುತ್ತದೆ. ಆದರೆ, ಕಟ್ಟಡ ನಿರ್ಮಾಣ ತಡವಾಗಲಿದೆ. ಬದಲಿ ವ್ಯವಸ್ಥೆ ತಕ್ಷಣ ದೇವಸ್ಥಾನದಿಂದಲೇ ಮಾಡುತ್ತೇವೆ ಎಂದರು.

ಆಶಾ ಕಾರ್ಯಕರ್ತೆಯರ ವೇತನ ಪರಿಷ್ಕರಣೆ

ಆಶಾ ಕಾರ್ಯಕರ್ತೆಯರಿಗೆ ಕೊರೋನಾ ವ್ಯಾಪ್ತಿಯಲ್ಲಿ ಬರಲಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯ ಸಿಗಲಿದೆ. ವೇತನ ಪರಿಷ್ಕರಣೆ, ಗೌರವ ಧನ ಬಗ್ಗೆ ಚರ್ಚಿಸಲಾಗುವುದು ಎಂದರು.
ಪ್ರತೀ ಗ್ರಾಮ ಪಂಚಾಯತ್ ಗಳು ಒಂದು ವಾಹನವನ್ನು ತಿಂಗಳ ಮಟ್ಟಿಗೆ ಖರೀದಿಸಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕೊರೋನಾ ಪೀಡಿತರನ್ನು ಚಿಕಿತ್ಸೆ ನೀಡುವುದು, ಅಗತ್ಯವಿದ್ದಲ್ಲಿ ಇಂತಹುದಕ್ಕೊಂದು ವಾಹನ ಖರೀದಿಸಲು ಹೇಳಲಾಗಿದೆ.
ಮಂಗಳೂರಿನಲ್ಲಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಆದೇಶ ಹೊರಡಿಸಲು ಹೇಳಲಾಗುವುದು ಎಂದರು.

Advertisement. Scroll to continue reading.

ಬ್ಲ್ಯಾಕ್ ಫಂಗಸ್ ಗೆ ಉಚಿತ ಚಿಕಿತ್ಸೆ

ಪ್ರತೀ ಜಿಲ್ಲೆಗೊಂದರಂತೆ ಆಸ್ಪತ್ರೆಯಲ್ಲಿ
ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಕೊಡಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ. ಉಚಿತ ಚಿಕಿತ್ಸೆ ಕೊಡಬೇಕು ಎಂದು ಆದೇಶ ಹೊರಡಿಸಿದೆ ಎ

ಗ್ರಾಮ ಪಂಚಾಯಿತಿ ಸದಸ್ಯರಿಗೂ ಮೊದಲು ಲಸಿಕೆ

ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಕೊರೋನಾ ವಾರಿಯರ್ಸ್ ಮತ್ತು ಕಾರ್ಯಪಡೆ ಸದಸ್ಯರಾಗಿದ್ದು, ಅವರಿಗೂ ಪ್ರಥಮ ಪ್ರಾಶಸ್ತ್ಯ ಕೊಟ್ಟು ಲಸಿಕೆ ಕೊಡುವ ಬಗ್ಗೆ ಬೇಡಿಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದ್ದೆ. ಆದರೆ, ರಾಜ್ಯದಲ್ಲಿ ಒಟ್ಟು ಒಂಭತ್ತೊಂಭತ್ತೊಭತ್ತು ವರೆ ಸಾವಿರ ಸದಸ್ಯರಾಗುತ್ತಾರೆ. ಹಾಗಾಗಿ ನಿರ್ಧಾರ ತೆಗೆದುಕೊಳ್ಳುವ ಸ್ವಲ್ಪ ವಿಳಂಬವಾಗಿದೆ. ನಾಳೆ ಸಚಿವ ಸಂಪುಟದಲ್ಲಿ ಮತ್ತೆ ಗಮನಕ್ಕೆ ತರಲಾಗುವುದು ಎಂದು ಭರವಸೆಯಿತ್ತಿದ್ದಾರೆ.

Advertisement. Scroll to continue reading.

ಪರಿಹಾರ ನೀಡುವ ಭರವಸೆ

ಪ್ರಕೃತಿ ವಿಕೋಪದ ಸಂದರ್ಭ ಮನೆಗೆ ನೀರು ನುಗ್ಗಿದರೆ ಐದು ಸಾವಿರ ನೀಡಲಾಗಿದೆ. ಯಾರಿಗಾದರು ಸಿಕ್ಕಿಲ್ಲವಾದರೆ ಆ ಬಗ್ಗೆ ಪರಿಶೀಲಿಸಲಾಗುವುದು. ಮನೆ ಬಿದ್ದರೂ ಇಂತಿಷ್ಟು ಪರಿಹಾರ ಘೋಷಿಸಲಾಗಿದೆ. ಪೂರ್ತಿ ಮನೆ ಬಿದ್ದರೆ, 5 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಡಲು ಹೇಳಲಾಗಿದೆ. ತಕ್ಷಣ ವರದಿ ಕೊಟ್ಟರೆ ಒಂದು ಲಕ್ಷ ನೀಡಿ, ನಂತರ ಹಂತ ಹಂತವಾಗಿ ನಾಲ್ಕು ಲಕ್ಷ ನೀಡಲಾಗುವುದು ಎಂದರು.
ಇನ್ನು ಎಪ್ರಿಲ್ ತಿಂಗಳಲ್ಲಿ ಕಲ್ಲಂಗಡಿ ಬೆಳೆ ಹಾಳಾದವರಿಗೆ ಪರಿಹಾರ ನೀಡಲಾಗುವುದು. ಈ ಬಗ್ಗೆ ಕೃಷಿ ಕೃಷಿ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಲಾಗುವುದು ಎಂದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com