ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಾರಂಬಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿರತಿಯಲ್ಲಿ ಕೋವಿಡ್ ಸೊಂಕು ಲಕ್ಷಣ ಇರುವ ಮತ್ತು ಪ್ರಾಥಮಿಕ ಸೋಂಕು ಇರುವ ಮನೆಗಳಿಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಡಾ. ಅಜಿತ್ ಕುಮಾರ್ ಶೆಟ್ಟಿ ತಂಡವು ಇಂದು ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದರು.
ಗ್ರಾಮದ ಅನೇಕ ಕಡೆಯಲ್ಲಿ, ಕೊರೊನಾ ಸೋಂಕು ಇದ್ದರೂ ಕೂಡಾ ತಪಾಸಣೆಗೆ ಬರದೇ ಇರುವ ಹಿನ್ನೆಲೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯತಿ ಅಭಿವ್ರದ್ದಿ ಅಧಿಕಾರಿ ಪರಜಾನಾ ಮತ್ತು ಆರೋಗ್ಯ ಸಹಾಯಕಿಯರು, ಅಧ್ಯಕ್ಷೆ ಗುಲಾಬಿ, ಪೋಲಿಸ್ ದಿವ್ಯ ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸದಸ್ಯರು ,ಆರೋಗ್ಯ ಲ್ಯಾಬ್ ಟೆಕ್ನಿಷನ್ ಇನ್ನಿತರರು ಈ ಸಂದರ್ಭ ಹಾಜರಿದ್ದರು.
Advertisement. Scroll to continue reading.