ಪಡುಬಿದ್ರಿ: ಹಸಿದವರಿಗೆ ಅನ್ನ ; ಸೇವಾನಿರತರ ಸೇವೆಗೆ ಸಾಥ್ ನೀಡಿದ ಸಹಕಾರಿ ಸಂಸ್ಥೆ
Published
0
ವರದಿ: ಶಫೀ ಉಚ್ಚಿಲ
ಕಾಪು : ಹಸಿದವರಿಗೆ ಅನ್ನ ನೀಡುತ್ತಿರುವ ಪಡುಬಿದ್ರಿ ಹಾಗು ಕಂಚಿನಡ್ಕದ ಸಮಾನ ಮನಸ್ಕ ಯುವಕರೊಂದಿಗೆ ಪಡುಬಿದ್ರಿಯ ಸಹಕಾರಿ ಸಂಸ್ಥೆ ಸಹಕಾರ ನೀಡುವ ಮೂಲಕ ಅಗತ್ಯವಿರುವವರ ನೆರವಿಗೆ ಧಾವಿಸಿದೆ.
ಕಳೆದ 27 ದಿನಗಳಿಂದ ಈ ತಂಡ ಪ್ರತಿನಿತ್ಯ ದಾನಿಗಳ ಸಹಕಾರದಿಂದ ನಿರ್ಗತಿಕರು,ನಿರಾಶ್ರಿತರು ಸೇರಿದಂತೆ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಕಾಯಕದಲ್ಲಿ ತೊಡಗಿದ್ದು,ದಾನಿಗಳು ಸಾಥ್ ನೀಡುವಂತೆ ಕೋರಿದೆ. ಅವರ ಮನವಿಗೆ ಥಟ್ಟನೇ ಸ್ಪಂದಿಸಿದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಮುಂದಿನ ಒಂದು ವಾರಗಳ ಅನ್ನದಾನಕ್ಕೆ ಮುಂದಾಗಿದೆ.
ಈ ಬಗ್ಗೆ ಸಹಕಾರಿ ಸಂಸ್ಥೆಯ ಅಧ್ಯಕ್ಷ ಸುದೀರ್ ಕುಮಾರ್ ಮಾತನಾಡಿ,ಹಸಿದವರಿಗೆ ಅನ್ನ ನೀಡುತ್ತಿರುವ ಯುವಕರು ತಂಡದ ಸೇವೆ ಶ್ಲಾಘನೀಯ.ಇವರ ಈ ಸಹೃದಯಿ ಕಾರ್ಯದಿಂದ ಪಡುಬಿದ್ರಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯ ನಡೆಸುವಂತಾಗಲಿ ಎಂದು ಹಾರೈಸಿದರು.ಈ ಸಂದರ್ಭ ಸಂಸ್ಥೆಯ ನಿರ್ದೇಶಕ ಮಾಧವ ಆಚಾರ್ಯ,ಸುಚರಿತ ಎಲ್.ಅಮೀನ್,ರಮಾನಂದ, ಸಿ.ಒ ನಿಶ್ಮಿತ ಪಿ.ಎಚ್ ಉಪಸ್ಥಿತರಿದ್ದರು.ಎಂ.ಎಸ್ ನಿಝಾಮ್, ಎಂ.ಎಸ್ ಶಾಪಿ,ಜ್ಯೋತಿ ಮೆನನ್ ,ಜಮೀರ್ ಕಂಚಿನಡ್ಕ,ಅಝೀಝ್ ಕೊಂಬನ್ ,ಶಫೀಕ್,ಇಮ್ರಾನ್, ಸಮದ್,ನೌಝಲ್, ಮಯ್ಯದ್ದಿ,ರೌಫ್, ಯಾಸೀರ್ ,ಅಬ್ದುರ್ರಹ್ಮಾನ್ ಹಾಗೂ ಅಬೂಬಕ್ಕರ್ ಊಟ ವಿತರಣೆಯ ನೇತ್ರತ್ವ ವಹಿಸಿದ್ದು,ಸ್ಥಳೀಯ ಸಮಾನ ಮನಸ್ಕ ಯುವಕರು ಸಾಥ್ ನೀಡಿದ್ದಾರೆ.