ವರದಿ : ದಿನೇಶ್ ರಾಯಪ್ಪನಮಠ
ಬೆಂಗಳೂರು : ಹೋಟೆಲ್ ಕಾರ್ಮಿಕರು ಮತ್ತು ಮಾಲೀಕರು, ಮಾಧ್ಯಮ ವರದಿಗಾರರು, ಹಾಗೂ ಮೀನುಗಾರರು ಮತ್ತು ಸಂಕಷ್ಟದಲ್ಲಿರುವ ಎಲ್ಲಾ ರೀತಿಯ ಕಾರ್ಮಿಕ ವರ್ಗ ಫೋಟೋ ಸ್ಟುಡಿಯೋ ಅಸೋಸಿಯೇಷನ್ಸ್ ಇವರಿಗೆ ನೆರವಾಗುವಂತೆ ಸರ್ಕಾರವನ್ನು ಒತ್ತಾಯಿಸಿ ಇಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಡಾ. ರವಿ ಶೆಟ್ಟಿ ಬೈಂದೂರು ನೇತೃತ್ವದಲ್ಲಿ ನಿಯೋಗ ತೆರಳಿ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ತಕ್ಷಣ ಸಂಬಂಧಪಟ್ಟ ಇಲಾಖೆ ವತಿಯಿಂದ ಕಾರ್ಮಿಕರಿಗೆ ಸ್ಪಂದಿಸಿ ಸಂಕಷ್ಟದಲ್ಲಿರುವ ಹೋಟೆಲ್ ಕಾರ್ಮಿಕರ ಮತ್ತು ಹಗಲು-ರಾತ್ರಿಯೆನ್ನದೆ ತನ್ನ ಜೀವದ ಹಂಗು ತೊರೆದು ತಾಜಾ ಸುದ್ದಿಗಳನ್ನು ಮತ್ತು ಕರೋನ ಮಾಹಿತಿಯನ್ನು ನೀಡುತ್ತಿರುವ ಮಾಧ್ಯಮ ವರದಿಗಾರರಿಗೆ ವರದಿಗಾರರು ಹಾಗೂ ಮೀನುಗಾರರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಡಾ ರವಿ ಶೆಟ್ಟಿ ಬೈಂದೂರು, ಹೋಟೆಲ್ ಕಾರ್ಮಿಕರು ಮತ್ತು ಮಾಲೀಕರು ಬಹಳ ಸಂಕಷ್ಟದಲ್ಲಿದ್ದು, ಸರ್ಕಾರ ಈಗ ಅವರ ನೆರವಿಗೆ ಧಾವಿಸದಿದ್ದರೆ ಮುಂದಿನ ದಿನಗಳಲ್ಲಿ ಉದ್ಯಮ ಸಂಕಷ್ಟಕ್ಕೀಡಾಗಲಿದೆ. ಇದರಿಂದ ಸರ್ಕಾರದ ಆಯ-ವ್ಯಯದ ಮೇಲೂ ಪರಿಣಾಮ ಬೀರಲಿದೆ.
ಅಲ್ಲದೆ ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಮತ್ತೊಂದು ಮಾಡುತ್ತಿರುವ ಸರ್ಕಾರ ತಕ್ಷಣ ತನ್ನ ನಿಲುವನ್ನು ಬದಲಾಯಿಸಿ ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
Advertisement. Scroll to continue reading.
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಪದಾಧಿಕಾರಿಗಳು ಈ ನಿಯೋಗದಲ್ಲಿ ಉಪಸ್ಥಿತರಿದ್ದರು.