ಚಂದನವನದ ಹಿರಿಯ ನಿರ್ದೇಶಕ ತಿಪಟೂರು ರಘು ಇಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶಂಕರಮಠದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಹಿಟ್ ಚಿತ್ರಗಳನ್ನು ನೀಡಿರೋ ನಿರ್ದೇಶಕ
ನಿರ್ದೇಶಕ ಹಾಗೂ ನಟನಾಗಿಯೂ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವಿಷ್ಣುವರ್ಧನ್, ಶಂಕರ್ ನಾಗ್ ನಟನೆಯ ಬೆಂಕಿ ಬಿರುಗಾಳಿ', ಬಿ.ಸರೋಜಾ ದೇವಿ, ರಾಮಕೃಷ್ಣ ಅಭಿನಯದ
ಲೇಡಿಸ್ ಹಾಸ್ಟೆಲ್’, ವಿಷ್ಣುವರ್ಧನ್, ಜಯಂತಿ, ಜಯಮಾಲಾ ನಟಿಸಿರುವನಾಗ ಕಾಳ ಭೈರವ',
ಆಕ್ರೋಶ’, `ಕಲ್ಲು ವೀಣೆ ನುಡಿಯಿತು’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದರು.
Advertisement. Scroll to continue reading.