ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಸೌಕೂರು ಏತ ನೀರಾವರಿ ಮೂಲ ನಕ್ಷೆಯನ್ನು ಬದಲಾಯಿಸಿ ನೆಂಪುವಿನ ಕಡೆಗೆ ಪೈಪ್ ಲೈನ್ ಸಾಗುತ್ತಿದ್ದು, ಇದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ತ್ರಾಸಿ ವಲಯ ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತ ಪಡಿಸಿದರು.
ಕಾಮಗಾರಿ ಪ್ರಾರಂಭದ ವೇಳೆ ಸೌಕೂರು, ಗುಲ್ವಾಡಿ, ಹಟ್ಟಿಯಂಗಡಿ, ಕಟ್ ಬೇಲ್ತೂರು ಒಳಗೊಂಡಂತೆ ನಕ್ಷೆ ರೂಪಿಸಲಾಗಿತ್ತು. ಆದರೆ ಈಗ ಪೈಪ್ ಲೈನ್ ಗಳು ನೆಂಪು ಕಡೆಗೆ ತಿರುಗುತ್ತಿದೆ. ಹಿಲ್ ಕೋಡು ಪ್ರದೇಶಕ್ಕೆ ನೀರು ಹಾಯಿಸಿದರೆ ೧೦೦ ಹೆಕ್ಟೇರ್ ಕೃಷಿ ಭೂಮಿಗೆ ಉಪಯೋಗವಿದೆ.
Advertisement. Scroll to continue reading.
ಕರೋನಾ ಸಂದರ್ಭದಲ್ಲಿ ಸರಕಾರ ರೈತರನ್ನು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಅನ್ಯಾಯವಾದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.