ಕರಾವಳಿ

ಬ್ರಹ್ಮಾವರ : ಸೇತುವೆ, ಆಣೆಕಟ್ಟು ನಿರ್ಮಾಣದ ಬಳಿಕ ತೆರವುಗೊಳಿಸದ ಕಲ್ಲು, ಮಣ್ಣು; ಕೃತಕ ಪ್ರವಾಹದ ಭೀತಿ

0


ಬ್ರಹ್ಮಾವರ : ಪಶ್ಚಿಮ ಘಟ್ಟ ದಿಂದ ಹರಿದು ಬಂದು ಸಮುದ್ರ ಸೇರುವ ಎಲ್ಲಾ ನದಿಗಳಿಗೆ ಸಂಪರ್ಕ ವ್ಯವಸ್ಥೆಗಾಗಿ ಮಾಡಲಾಗುವ ಸೇತುವೆ ಕಾಮಗಾರಿ, ಉಪ್ಪು ನೀರು ಬರದಂತೆ ಮಾಡುವ ಕಿಂಡಿ ಅಣೆಕಟ್ಟು, ಈ ಹಿಂದೆ ಮಾಡಲಾದ ರೈಲ್ವೆ ಸೇತುವೆ ಇದೆಲ್ಲದರ ರಚನೆ ಮಾಡುವಾಗ ಹಾಕಲಾಗುವ ಸಹಸ್ರಾರು ಲೋಡ್ ಮಣ್ಣು ಕಲ್ಲುಗಳನ್ನು ತೆರವು ಮಾಡದೆ ಉಳಿದಿರುವುದರಿಂದ ಕರಾವಳಿಯಲ್ಲಿ ಈ ವರ್ಷ ಕೃತಕ ಪ್ರವಾಹದ ಭೀತಿ ಎದುರಾಗಲಿದೆ .
ಹೆಬ್ರಿ ಬಳಿಯಿಂದ ಜನ್ಮ ತಳೆದು ಹರಿದು ಬರುವ ಸೀತಾ ನದಿಯೊಂದಕ್ಕೆ ಕೊಕ್ಕರ್ಣೆ, ನೀಲಾವರ, ಹನೆಹಳ್ಳಿ ಉಪ್ಪು ನೀರು ಕಿಂಡಿ ಅಣೆಕಟ್ಟು, ರೈಲ್ವೆ ಸೇತುವೆ, ಬಾರಕೂರು ಮತ್ತು ಮಾಬುಕಳ ಸೇತುವೆ ಸೇರಿ 6 ಸೇತುವೆ ಇದೆ. ಪ್ರತಿಯೊಂದು ಸಂಪರ್ಕ ವ್ಯವಸ್ಥೆ ಮಾಡುವಾಗ ಸಂಚಾರಕ್ಕೆ ಮತ್ತು ನೀರು ನುಗ್ಗದಂತೆ ತಡೆಯಾಗಿ ನದಿಗೆ ಮಣ್ಣು ತುಂಬಿಸಲಾಗಿ ಕಾಮಗಾರಿ ಬಳಿಕ ತುಂಬಿಸಿದ ಮಣ್ಣನ್ನು ತೆರವು ಮಾಡುವ ಕುರಿತು ಯಾವೂದೇ ಗುತ್ತಿಗೆ ಪಡೆದವರು ಮಾಡದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ.


ಬ್ರಹ್ಮಾವರ ಬಳಿಯ ಹೇರೂರು ಮಡಿಸಾಲು ಹೊಳೆಗೆ ಕಿಂಡಿ ಅಣೆಕಟ್ಟು ಕಾಮಗಾರಿಯಾಗುತ್ತಿದ್ದು, ಮೇ ಅಂತ್ಯದೊಳಗೆ ಕಾಮಗಾರಿ ಮುಗಿಯ ಬೇಕಿತ್ತು. ಆದರೆ, ಈ ವರ್ಷ ಬೇಗ ಮಳೆ ಬಂದ ಕಾರಣ ಅರ್ಧಕ್ಕೆ ನಿಲ್ಲುವಂತೆ ಆಗಿದೆ. ಕಾಮಗಾರಿಗಾಗಿ ಲೋಡು ಗಟ್ಟಲೆ ಮಣ್ಣು ತುಂಬಿಸಿದ್ದು ಈ ವರ್ಷದ ಪ್ರವಾಹಕ್ಕೆ ನದಿಯಲ್ಲಿ ತುಂಬಿಸಲಾದ ಮಣ್ಣು ಯಾವುದೋ ದಿಕ್ಕಿಗೆ ಚಲಿಸಿ ಉಪ್ಪೂರು ಪಶ್ಚಿಮ ಭಾಗದ ನದಿ ತೀರದಲ್ಲಿ ಕೃತಕ ಪ್ರವಾಹದಿಂದ ನೀರು ನುಗ್ಗುವ ಭೀತಿ ಎದುರಾಗಲಿದೆ .
ಬಾರಕೂರು ಸೇತುವೆ ಕುಸಿತಗೊಂಡು 10 ವರ್ಷದ ಹಿಂದೆ ಹೊಸ ಸೇತುವೆ ಮಾಡುವಾಗ ತಡೆಗಾಗಿ ಬಳಸಿದ ಮಣ್ಣು ರಸ್ತೆಯ ಪೈಪು , ಸಿಮೆಂಟ್ ಮಿಶ್ರಿತ ಬಂಡೆಗಳ ಪಳಯುಳಿಕೆ ಇಂದಿಗೂ ಕಂಡು ಬಂದು ಇಲ್ಲಿನ ಕಚ್ಚೂರು, ನಲ್ಕುದ್ರು , ಹಾಲೇಕೊಡಿ, ಹಂದಾಡಿ ಭಾಗದಲ್ಲಿ ನದಿಯ ನೀರಿನ ಹರಿವಿನ ದಿಕ್ಕು ಬದಲಿಸಿದೆ . ಅದೇ ರೀತಿಯಲ್ಲಿ ನಾನಾ ಭಾಗದಿಂದ ಮಳೆಗಾಲದಲ್ಲಿ ಹರಿದು ಬಂದು ನದಿ ಸೇರುವ ಮರಳನ್ನು ಮರಳುಗಾರಿಕೆಯಿಂದ ತೆರವುಗೊಳ್ಳುತ್ತಿದ್ದು ಕಳೆದ 2 ವರ್ಷದಿಂದ ಮರಳು ಶೇಖರಣೆ ಗೊಂಡು ನದಿಯಲ್ಲಿ ಮರಳಿನ ದಿಬ್ಬ ಉಂಟಾಗಿ ನೀರಿನ ಹರವಿಗೆ ತೊಡಕಾಗಲಿದೆ.
ಕರಾವಳಿಯ ಒಟ್ಟು 24 ನದಿಗಳಲ್ಲಿ ಹೊಸದಾಗಿ ರಚನೆಯಾಗುವ ಸೇತುವೆ, ಕಿಂಡಿ ಅಣೆಕಟ್ಟುಗಳಿಗಾಗಿ ಮಾಡುವಾಗ ಬದಲಿ ರಸ್ತೆ ಮತ್ತು ದಂಡೆಯನ್ನು ಕಾಮಗಾರಿ ಮುಗಿದ ಬಳಿಕ ತೆರವು ಆಗದಿದ್ದಲ್ಲಿ ಈ ವರ್ಷ ಬಾರೀ ವಿಕೋಪ ಉಂಟಾಗಲಿದೆ ಎನ್ನುವುದು ನದಿ ತೀರದ ಜನರ ಅತಂಕವಾಗಿದೆ .

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com