ಕಾಪು: ಹಣದ ವ್ಯವಹಾರಕ್ಕೆ ಸಂಬಂಧಿಸಿ ಪೆಟ್ರೋಲ್ ಬಂಕ್ ಮಾಲೀಕನಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ಮೂಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕೆ.ದೀಪಕ್ರಾಜ್ ಶೆಟ್ಟಿ ಎಂಬವರು ದೂರು ನೀಡಿದ್ದಾರೆ. ಮೂಳೂರಿನ ಭಾರತ್ ಪೆಟ್ರೋಲ್ ಬಂಕ್ ನಲ್ಲಿ 4 ತಿಂಗಳಿಂದ ಸುಖೇಶ್ ಶೆಟ್ಟಿ ಎಂಬಾತ ವ್ಯವಸ್ಥಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಪೆಟ್ರೋಲ್ ಬಂಕ್ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರವನ್ನು ಸುಖೇಶ್ ಶೆಟ್ಟಿ ನೋಡಿಕೊಂಡಿದ್ದು, ಕೆ.ದೀಪಕ್ರಾಜ್ ಶೆಟ್ಟಿ ಅವರ ಪೆಟ್ರೋಲ್ ಬಂಕ್ನ ಹಣವನ್ನು ಕಾರ್ಡ್ ಮೂಲಕ ಮತ್ತು ನಗದು ರೀತಿ ಬ್ಯಾಂಕಿಗೆ ಸುಖೇಶ್ ಶೆಟ್ಟಿ ಜಮೆ ಮಾಡಿ ಬರುತ್ತಿದ್ದ. ಹೀಗೆ ಜಮೆ ಮಾಡಿದ ಹಣದಲ್ಲಿ ವ್ಯತ್ಯಾಸ ಬಂದಿರುವುದಾಗಿ ಕಂಪನಿಯವರು ಕೆ.ದೀಪಕ್ರಾಜ್ ಶೆಟ್ಟಿಯವರಿಗೆ ತಿಳಿಸಿದ್ದು, ಈ ಬಗ್ಗೆ ಸುಖೇಶ್ ಬಳಿ ವಿಚಾರಿಸಿದಾಗ ಆತ ಈ ಬಗ್ಗೆ ಪರಿಶೀಲಿಸಿ, ತಿಳಿಸುವುದಾಗಿ ಹೇಳಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಮೇ 27 ರಂದು ಸಂಜೆ ಪೆಟ್ರೋಲ್ ಬಂಕ್ನಿಂದ ತೆರಳಿದ್ದ.
ಬಳಿಕ ಮೇ 28 ರಂದು ದೀಪಕ್ರಾಜ್ ಶೆಟ್ಟಿ ಬ್ಯಾಂಕ್ ಖಾತೆ ಪರಿಶೀಲಿಸಿದಾಗ 18,00,000 ರೂ. ವ್ಯತ್ಯಾಸ ಕಂಡು ಬಂದಿದೆ. ಅಲ್ಲದೆ, ಸುಖೇಶ್ ಬ್ಯಾಂಕಿಗೆ ಸಂಬಂಧಪಟ್ಟ ಅಕೌಂಟ್ ಪುಸ್ತಕ ಕೊಂಡೊಯ್ದಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸುಖೇಶ್ ಶೆಟ್ಟಿ ಪೆಟ್ರೋಲ್ ಬಂಕ್ನ ಹಣವನ್ನು ಬ್ಯಾಂಕಿಗೆ ಜಮೆ ಮಾಡದೆ ಮೋಸ ಮಾಡಿರುವುದಾಗಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.