ವರದಿ : ಮಹೇಶ್
ಬೈಂದೂರು : ಕಳೆದ ಕೆಲವು ದಿನಗಳ ಹಿಂದೆ ಕುಂದಾಪುರ ತಾಲೂಕಿನ ಯಡಮೊಗೆಯಲ್ಲಿ ಉದಯ ಗಾಣಿಗ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಾಣೇಶ್ ಯಡಿಯಾಳ, ಬಾಲಚಂದ್ರ ಭಟ್ ಮತ್ತು ಸಂಗಡಿಗರು ಇವರುಗಳಿಗೆ ಕಠಿಣವಾದ ಶಿಕ್ಷೆಯನ್ನು ನೀಡಿ ಮೃತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವ ಮುನ್ಸೂಚನೆಯನ್ನು ತಗ್ಗರ್ಸೆ ಗಾಣಿಗ ಸೇವಾ ಸಂಘದ ಕಾರ್ಯದರ್ಶಿ ವೀರಭದ್ರ ಗಾಣಿಗ ಹೇಳಿದರು. ಅವರು ಬೈಂದೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಸಮಯದಲ್ಲಿ ತಗ್ಗರ್ಸೆ ಗ್ರಾಮದ ಗಾಣಿಗ ಸೇವಾ ಸಂಘದ ಅಧ್ಯಕ್ಷ ರಾಜು ಗಾಣಿಗ ಹುಳುವಾಡಿ, ಗೌರವಾಧ್ಯಕ್ಷ ಗೋವಿಂದ ಗಾಣಿಗ ಹೆಗ್ಗೇರಿ, ಸದಸ್ಯರಾದ ವಿಜಯ ಗಾಣಿಗ ಹಾಲಂಬೇರು, ಗಣೇಶ್ ಗಾಣಿಗ ತಗ್ಗರ್ಸೆ, ಆನಂದ ಶೆಟ್ಟಿ ಭಟ್ಕಳ ಉಪಸ್ಥಿತರಿದ್ದರು.
Advertisement. Scroll to continue reading.