ಬೆಂಗಳೂರು : 5% ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ 16 ಜಿಲ್ಲೆಗಳಲ್ಲಿ ಕೆಲವೊಂದು ವಿನಾಯಿತಿ ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಕೊಪ್ಪಳ, ಚಿಕ್ಕ ಬಳ್ಳಾಪುರ, ಬೆಂಗಳೂರು ನಗರ, ಕಲ್ಬುರ್ಗಿ, ಹಾವೇರಿ, ಬೀದರ್ , ಮಂಡ್ಯ, ಕೋಲಾರ, ಗದಗ,ರಾಮನಗರ, ಬಾಗಲಕೋಟೆ, ಯಾದಗಿರಿ, ತುಮಕೂರು, ರಾಯಚೂರು ಜಿಲ್ಲೆಗಳಲ್ಲಿ ಸಡಿಲಿಕೆ ಮಾಡಿ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ.
ಕೋವಿಡ್ ಉಸ್ತುವಾರಿಗಳ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಏನಿರಲಿದೆ?
Advertisement. Scroll to continue reading.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಅಂಗಡಿ ಗಳನ್ನು ತೆರೆಯಲು ಅವಕಾಶ.
ಎಸಿ ಚಾಲನೆ ಗೊಳಿಸದೆ ಮದ್ಯಪಾನ ಹೊರತಾಗಿ ಹೊಟೇಲ್, ರೆಸ್ಟೋರೆಂಟ್ ತೆರೆಯಲು ಅವಕಾಶ.
ಬಸ್, ಮೆಟ್ರೋ ಸಂಚಾರಕ್ಕೆ ಅವಕಾಶ. (ಶೇ.50)
ವೀಕ್ಷಕರಿಲ್ಲದೆ ಹೊರಾಂಗಣ ಕ್ರೀಡೆಗಳಿಗೆ ಅವಕಾಶ.
Advertisement. Scroll to continue reading.
ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.
ಖಾಸಗಿ, ಸರ್ಕಾರಿ ಕಛೇರಿಗಳಲ್ಲಿ 50% ಸಿಬ್ಬಂದಿಗಳಿಗೆ ಅವಕಾಶ.
ಲಾಡ್ಜ್, ರೆಸಾರ್ಟ್, ಜಿಮ್ ಎಸಿ ಇಲ್ಲದೆ 50% ಅವಕಾಶ ನೀಡಲಾಗಿದೆ.
ಬಿಎಂಟಿಸಿ, ಮೆಟ್ರೋ ಸಂಚಾರಕ್ಕೆ 50% ದಷ್ಟು ಅವಕಾಶ.
Advertisement. Scroll to continue reading.
13 ಜಿಲ್ಲೆಗಳಲ್ಲಿ ಯಥಾಸ್ಥಿತಿ
ಶೇ.5 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಬೆಂಗಳೂರು ಗ್ರಾ. , ಕೊಡಗು, ಧಾರವಾಡ, ವಿಜಯನಗರ, ಚಾಮರಾಜನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮೊದಲಿನ ಮಾರ್ಗಸೂಚಿ ಮುಂದುವರೆಯಲಿದೆ. ಶೇ. 10 ಕ್ಕಿಂತ ಹೆಚ್ಚು ಪಾಸಿಟಿವಿಟಿ ಇರುವ ಮೈಸೂರಿನಲ್ಲಿ ಈ ಹಿಂದಿನ ಮಾರ್ಗಸೂಚಿ ಮುಂದುವರಿಕೆಯಾಗಲಿದೆ.
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ
ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ ನೈಟ್ ಕರ್ಫ್ಯೂ, ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯ ವರೆಗೆ ವೀಕೆಂಡ್ ಕರ್ಫ್ಯೂ ಎಂದಿನಂತೆ ಮುಂದುವರಿಯಲಿದೆ. ಸಿನಿಮಾ ಮಂದಿರ, ಮಾಲ್ ಗಳು, ಪಬ್ ಗಳು, ತೆರೆಯಲು ಅವಕಾಶವಿಲ್ಲ. ಜೂ.21 ರಿಂದ ಜುಲೈ 5 ರ ವರೆಗೆ ಈ ಮಾರ್ಗಸೂಚಿ ಇರಲಿದೆ. ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಿಎಂ ಹೇಳಿದ್ದಾರೆ.
Advertisement. Scroll to continue reading.