ಕಾಪು : “ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ” ಒಂದು ಪಕ್ಷವಲ್ಲ. ಜನರ ಹಕ್ಕುಗಳು ಜನರಿಗೆ ತಲುಪಿಸುವವ ಹಾಗು ಹಸಿವು ಮತ್ತು ಭಯವನ್ನು ಮುಕ್ತಗೊಳಿಸುವ ಚಳುವಳಿಯಾಗಿದೆ ಎಂದು ಎಸ್ಡಿಪಿಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪೊಲ್ಯ ಹೇಳಿದರು.
ಎಸ್ಡಿಪಿಐ ಇದರ 12 ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಉಚ್ಚಿಲದ ಭಾಸ್ಕರ ನಗರದಲ್ಲಿರುವ ಎಸ್ಡಿಪಿಐ ಕಚೇರಿ ಮುಂಭಾಗದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 2009 ರ ಜೂ.21 ರಂದು ಪಕ್ಷ ಅಸ್ತಿತ್ವಕ್ಕೆ ಬಂದ ಎಸ್ಡಿಪಿಐ,ಹಸಿವು ಮುಕ್ತ ಹಾಗು ಭಯ ಮುಕ್ತ ಧ್ಯೇಯದೊಂದಿಗೆ ಅತ್ಯಂತ ಕಡಿಮೆ ಸಮಯದಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಜಯಗಳಿಸಿದೆ.ಎಸ್ಡಿಪಿಐ ಜಾತಿ ಧರ್ಮ ಬದಿಗಿಟ್ಟು ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ ಜನರ ಹಸಿವು ನೀಗಿಸುವ ಕೆಲಸದಲ್ಲಿ ತೊಡಗಿದೆ ಎಂದರು.
ಎಸ್ಡಿಪಿಐ ಉಚ್ಚಿಲ ಪಂಚಾಯತ್ ಕಮಿಟಿ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಬ್ದುಲ್ ರಝಾಕ್ ವೈ.ಎಸ್, ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಗ್ರಾ.ಪಂ ಸದಸ್ಯ ಆಸೀಫ್ ವೈ.ಸಿ, ಪಿಎಫ್ಐ ಉಚ್ಚಿಲ ವಲಯ ಅಧ್ಯಕ್ಷ ಇಬ್ರಾಹಿಂ ಪಲಿಮಾರ್, ಮಸ್ಜಿದೇ ಹನಫ್ ಅಧ್ಯಕ್ಷ ಪಿ.ಎಂ ಇಬ್ರಾಹಿಂ, ಪೊಲ್ಯ ಇಮಾಯತುಲ್ ಇಸ್ಲಾಂ ಮಸೀದಿ ಅಧ್ಯಕ್ಷ ಹಸನ್ ಮುನ್ನ, ವೈವಾ ಎರ್ಮಾಳು ಅಧ್ಯಕ್ಷ ಇಬ್ರಾಹಿಂ ಅರ್ಶ್, ಎಸ್ಡಿಟಿಯು ಸಮಿತಿ ಸದಸ್ಯ ಆಶ್ರಫ್ ಕಾಸಿಂ, ಹೆಲ್ಪಿಂಗ್ ಹ್ಯಾಂಡ್ ಅಧ್ಯಕ್ಷ ಫಝಲ್ ಶೇಖ್ ಹಾಗು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ನೂರು ನವಾಝ್ ಸ್ವಾಗತಿಸಿ. ಕಲೀಲ್ ಉಮರ್ ವಂದಿಸಿದರು.
Advertisement. Scroll to continue reading.