ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದೇಶದಾದ್ಯಂತ ಇಂದು ಕೊರೋನಾ ವಾರಿಯರ್ಸ್ ನಿಯಂತ್ರಣಕ್ಕೆ ಉಚಿತ ಲಸಿಕೆ ಅಭಿಯಾನ ಆರಂಭಗೊಂಡಿದೆ. ಬ್ರಹ್ಮಾವರ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಬಾರಕೂರು ಪ್ರಾಥಮಿಕ ಕೇಂದ್ರದಲ್ಲಿ ಇಂದು ಬೆಳಿಗ್ಗೆಯಿಂದ ಜನರು ಸಾಲು ಗಟ್ಟಿ ನಿಂತು ಲಸಿಕೆ ಪಡೆಯುವ ದೃಶ್ಯ ಕಂಡು ಬಂತು.
ಬ್ರಹ್ಮಾವರ ಬಳಿಯ ಹಾರಾಡಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮತ್ತು ಅಲ್ಲಿನ ಸದಸ್ಯರು ಬೈಕಾಡಿಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿರಿಗೆ ಲಸಿಕೆ ಪಡೆಯಲು ಅನುಕೂಲಕರ ವ್ಯವಸ್ಥೆ ಮಾಡಿದ್ದರು.
Advertisement. Scroll to continue reading.
ಆಸ್ಪತ್ರೆಯಲ್ಲೂ ಕೂಡಾ ಲಸಿಕೆ ಪಡೆಯುವವರ ಸಂಖ್ಯೆ ಇಂದು ಹೆಚ್ಚಿಗೆ ಇತ್ತು. ಡಾ ಅಜಿತ್ ಕುಮಾರ್ ಶೆಟ್ಟಿ, ಡಾ ಮಹೇಶ್ ಐತಾಳ್, ಡಾ ಮಹಾಬಲರವರು ಸಿಬ್ಬಂದಿಯೊಂದಿಗೆ ಲಸಿಕೆ ನೀಡುವಲ್ಲಿ ಶ್ರಮಿಸಿದರು. ಬಾರಕೂರಿನಲ್ಲಿ 400, ಬ್ರಹ್ಮಾವರದಲ್ಲಿ ಇಂದು 600 ಲಸಿಕೆ ವಿತರಣೆ ಆಗಲಿದೆ.