ವಿಜಯನಗರ : ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಶ್ವರ ನಗರದಲ್ಲಿ, ಕಾರ ಹುಣ್ಣಿಮೆ ಹಬ್ಬ ಸಂಭ್ರಮದಿಂದ ನಡೆಯಿತು. ಕೂಡ್ಲಿಗಿಯಲ್ಲಿ ಎತ್ತುಗಳನ್ನು ಸ್ನಾನ ಮಾಡಿಸಿ, ವಿಧ ವಿಧವಾದ ಬಣ್ಣಗಳಲ್ಲಿ ಗುಲಾಲ್ ಹಚ್ಚಿ, ಬಾಸಿಂಗ, ಹಣೆಪಟ್ಟಿ, ಕೊರಳಿಗೆ ಘಂಟೆ ಕಟ್ಟಿ ಮನೆಯವರೆಲ್ಲಾ ಸೇರಿ ಪೂಜೆ ಮಾಡಿದರು. ಬಳಿಕ ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ವಿಶೇಷ ಪೂಜಾ ಸಂಭ್ರಮ
ಮುಂಗಾರು ಮಳೆ ಆರಂಭದ ಹಿನ್ನೆಲೆಯಲ್ಲಿ ಉಳುಮೆಗೆ ಭೂಮಿ ಸಜ್ಜಾಗಿದೆ. ಹಾಗಾಗಿ ನೆಲ ಉತ್ತು ಹದ ಮಾಡುವ ಎತ್ತುಗಳಿಗೆ ಧನ್ಯವಾದ ಅರ್ಪಿಸುವ ಸಲುವಾಗಿ ಅವುಗಳಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡುವ ಹಬ್ಬ `ಕಾರು ಹಬ್ಬ’.
ಜೇಷ್ಠ ಮಾಸದ ಹುಣ್ಣಿಮೆಯ ಅನುರಾಧ ನಕ್ಷತ್ರದ ದಿನ ಹಬ್ಬ ಆಚರಿಸಲಾಗುತ್ತದೆ. ಎತ್ತುಗಳ ಮೈ ತೊಳೆದು, ಬಣ್ಣ ಹಚ್ಚಿ ಸಿಂಗರಿಸಲಾಗುತ್ತದೆ. ಮುತ್ತೈದೆಯರು ಪೂಜೆ ಸಲ್ಲಿಸಿ, ಹೋಳಿಗೆ ಸೇರಿದಂತೆ ಅನೇಕ ಖಾದ್ಯಗಳನ್ನು ಎಡೆ ಇಡುತ್ತಾರೆ. ಇದಕ್ಕೆ ಪ್ರತಿಯಾಗಿ ಮುತ್ತೈದೆಯರಿಗೆ ಉಡಿ ತುಂಬಿ ಮಾಲೀಕರು ಕೃತಜ್ಞತೆ ಸಲ್ಲಿಸುತ್ತಾರೆ.
Advertisement. Scroll to continue reading.