ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕಾಡೂರು ಗ್ರಾಮದ ಮುಂಡಾಡಿ ಬಡಾಬೆಟ್ಟು ಯುಕ್ತಿ ಶೆಟ್ಟಿ (9) ಎಂಬ ಮಗು ಬ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿದೆ. ಕುಟುಂಬದ ಸಂಕಷ್ಟ ಕಂಡ ಬಿಲ್ಲಾಡಿ ಗ್ರಾಮಪಂಚಾಯತ್ ಮಾಜಿ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಅವರ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣವಾದ Milaap ಆಪ್ ಮುಖಾಂತರ ಹಾಗೂ ವಿವಿಧ ದಾನಿಗಳ ಮೂಲಕ ಒಗ್ಗೂಡಿಸಿದ 1.52 ಲಕ್ಷ ಮೊತ್ತವನ್ನು ಯುಕ್ತಿ ಶೆಟ್ಟಿಯ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸಂತೋಷ್ ಶೆಟ್ಟಿ ಮುಂಡಾಡಿ, ವಿಶ್ವಜ್ಞಾನ ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯ ಸುಧೀರ್ ಶೆಟ್ಟಿ ಮುಂಡಾಡಿ ಉಪಸ್ಥಿತರಿದ್ದರು.
Advertisement. Scroll to continue reading.