ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ದತ್ತಾಶ್ರಮ ಆನಗಳ್ಳಿ ಆಶ್ರಯದಲ್ಲಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಅಭಯಹಸ್ತ ಹೆಲ್ಪ್ ಲೈನ್ ಉಡುಪಿ ,ಗೆಳೆಯರ ಬಳಗ (ರಿ) ಆನಗಳ್ಳಿ ಹಾಗೂ ಹೆಲ್ಪಿಂಗ್ ಹ್ಯಾಂಡ್ ಕುಂದಾಪುರ ಇವರ ಸಹಯೋಗದೊಂದಿಗೆ ಗೆಳೆಯರ ಬಳಗ ಸಭಾ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಇದುವರೆಗೆ 49 ಬಾರಿ ರಕ್ತದಾನ ಮಾಡಿದ ಸುರೇಂದ್ರ ಸಂಗಮ್ ಹಾಗೂ ಕೆವಿನ್ ಡಿ ಸೋಜಾ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಗದೀಶ್ ಕೋಟೇಶ್ವರ, ರವಿ ಪುತ್ರನ್ ಆನಗಳ್ಳಿ,ಜಯಕರ ಶೆಟ್ಟಿ, ಸತೀಶ್ ಸಾಲಿಯಾನ್, ಪ್ರದೀಪ್ ಪುತ್ರನ್ ಕೋಟೇಶ್ವರ, ಶರತ್ ಆನಗಳ್ಳಿ, ಸುಧಾಕರ ಕಾಂಚನ್, ಭಾಸ್ಕರ ಬಿಲ್ಲವ ಉಪಸ್ಥಿತರಿದ್ದರು.
Advertisement. Scroll to continue reading.