ಉಡುಪಿ: ಕೋವಿಡ್-19 ರ ಲಾಕ್ ಡೌನ್ ಕಾರಣದಿಂದ ಸುಮಾರು ಎರಡೂವರೆ ತಿಂಗಳ ಕಾಲ ಖಾಸಗಿ ಬಸ್ಸುಗಳ ಸಂಚಾರ ಸ್ಥಗಿತಗೊಂಡಿತ್ತು . ಅನ್ ಲಾಕ್ 2.0 ಮಾರ್ಗಸೂಚಿಯಂತೆ ಇಂದಿನಿಂದ ಖಾಸಗಿ ಬಸ್ಸುಗಳು ಮತ್ತೆ ರಸ್ತೆ ಇಳಿದಿವೆ. ಮುಂಜಾನೆಯಿಂದಲೇ ಬಸ್ಸ್ ಗಳ ಓಡಾಟ ಪ್ರಾರಂಭವಾಗಿದ್ದು ಕೇವಲ ಬೆರಳೆಣಿಕೆಯಷ್ಟು ಖಾಸಗಿ ಬಸ್ಸುಗಳು ಮಾತ್ರ ಓಡಾಡುತ್ತಿವೆ.
ಬಸ್ ಸಂಚಾರ ಸ್ಥಗಿತ ಗೊಂಡ ಕಾರಣದಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಬಸ್ಸುಗಳಲ್ಲಿ ಕೇವಲ 50 ಶೇಕಡಾ ಪ್ರಯಾಣಿಕರಿಗೆ ಮಾತ್ರ ಅವಕಾಶ ಎಂದು ಸರಕಾರ ಸೂಚಿಸಿದೆ. ಸರಕಾರದ ನಿಯಮಾವಳಿಯಂತೆ ಪ್ರಯಾಣಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅನಂತರ ಕಾಪಾಡಿಕೊಳ್ಳಬೇಕು. ಯಾರು ಕೂಡ ನಿಂತು ಪ್ರಯಾಣ ಮಾಡಬಾರದು. ಈ ನಿಯಮವನ್ನು ಉಲ್ಲಂಘಿಸಿದರೆ ಬಸ್ಸು ಮಾಲಕರು ಮತ್ತು ಸಿಬ್ಬಂದಿ ಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಜಿಲ್ಲಾಡಳಿತವೂ ಖಡಕ್ ಎಚ್ಚರಿಕೆಯನ್ನೂ ಮಾಡಿದೆ.
ಇನ್ನು ದಿನೇ ದಿನೇ ತೈಲ ಬೆಲೆ ಏರಿಕೆಯಿಂದಾಗಿ ಬಸ್ಸುಗಳ ದರ ಶೇಕಡಾ 20 – 25 ರಷ್ಟು ಹೆಚ್ಚಳವಾಗಿದ್ದು, ಜನರ ಜೀವನಕ್ಕೆ ಮತ್ತಷ್ಟು ಹೊರೆಯಾಗುತ್ತಿದೆ.
Advertisement. Scroll to continue reading.