ರಾಜ್ಯ

ದೇವಸ್ಥಾನಗಳಲ್ಲಿ ದೇವರ ದರ್ಶನ ಮಾಲ್ ಗಳನ್ನು ತೆರೆಯಲು ಅವಕಾಶ ನೀಡಿ ಸಿಎಂ ಯಡಿಯೂರಪ್ಪ ಘೋಷಣೆ

0

ಬೆಂಗಳೂರು : ದೇವಸ್ಥಾನಗಳಲ್ಲಿ ದೇವರ ದರ್ಶನ, ಮಾಲ್ ಗಳನ್ನು ತೆರೆಯಲು ಅವಕಾಶ ನೀಡಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಕೋವಿಡ್ ಉಸ್ತುವಾರಿಗಳೊಂದಿಗಿನ ಮಹತ್ವದ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ, ಹೋಮ ಹವನಕ್ಕೆ ಅವಕಾಶವಿಲ್ಲ. ಜು. 5 ರಿಂದ 19 ರ ವರೆಗೆ ಮಾತ್ರ ಈ ಮಾರ್ಗಸೂಚಿ ಅನ್ವಯ . ನೈಟ್ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ ಇರಲಿದೆ. ವಾರಾಂತ್ಯ ಕರ್ಫ್ಯೂ ಇಲ್ಲ ಎಂದು ಅವರು ಹೇಳಿದ್ದಾರೆ

ಏನಿರಲಿದೆ?

Advertisement. Scroll to continue reading.

ಕೊರೋನಾ ನಿಯಮಾನುಸಾರ ಮಾಲ್ ಗಳನ್ನು ತೆರೆಯಲು ಅವಕಾಶ.
ರಾತ್ರಿ 11 ಗಂಟೆಯ ವರೆಗೆ ಸಂಚರಿಸಲು ಅವಕಾಶ.
ಸರ್ಕಾರ, ಖಾಸಗಿ ಕಂಪೆನಿಗಳಲ್ಲಿ 100% ದಷ್ಟು ಸಿಬ್ಬಂದಿಯೊಂದಿಗೆ ಅವಕಾಶ. ಕೈಗಾರಿಕೆಗಳಿಗೂ ಅವಕಾಶ.(100%)
ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕಷ್ಟೇ ಅವಕಾಶ.
ಮೆಟ್ರೋ, ಬಸ್ ಸಂಚಾರ. (ಶೇಕಡಾ 100)
ಹೋಟೆಲ್ ಗಳಿಗೆ ಅವಕಾಶ.(100%)
ಬಾರ್ ಗಳಿಗೂ ಅವಕಾಶ.(ರಾತ್ರಿ 9 ಗಂಟೆಯವರೆಗೆ) ಈಜುಕೊಳಗಳಿಗೆ ಕ್ರೀಡಾ ಪಟುಗಳಿಗೆ ಮಾತ್ರ ಅವಕಾಶ. ಮದುವೆಗೆ 100 ಮಂದಿಗೆ ಅವಕಾಶ. ಅಂತ್ಯಸಂಸ್ಕಾರಕ್ಕೆ 20 ಮಂದಿಗೆ ಅವಕಾಶ. ವಾರಾಂತ್ಯ ಕರ್ಫ್ಯೂ ಇಲ್ಲ. ನೈಟ್ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ

ಏನಿಲ್ಲ?
ಥಿಯೇಟರ್, ಮಲ್ಟಿಫ್ಲೆಕ್ಸ್ ಗಳಿಗೆ ಅವಕಾಶವಿಲ್ಲ. ಪ್ರತಿಭಟನೆ ಅವಕಾಶ ಇಲ್ಲ. ಪಬ್, ಕ್ಲಬ್ ಗಳಿಗೆ ಅವಕಾಶ ಇಲ್ಲ. ಶಾಲೆ, ಕಾಲೇಜುಗಳಿಗೆ ಅವಕಾಶವಿಲ್ಲ. ಈ ಬಗ್ಗೆ ಚರ್ಚಿಸಿ ಮುಂದಿನವಾರ ನಿರ್ಧಾರ.

ಸಿಎಂ ಎಚ್ಚರಿಕೆ

Advertisement. Scroll to continue reading.

ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com