ಕುಂದಾಪುರ : ಮೀಸಲು ಅರಣ್ಯದಲ್ಲಿ ಪ್ರಾಣಿ ಬೇಟೆಗೆ ಯತ್ನ; ನಾಲ್ವರು ವಶಕ್ಕೆ
Published
0
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಬಿಲ್ಲಾಡಿ ಬ್ಲಾಕ್ ಮೀಸಲು ಅರಣ್ಯದಲ್ಲಿ ಪ್ರಾಣಿಗಳನ್ನು ಭೇಟೆಯಾಡಲು ಹೊರಟಿದ್ದ ನಾಲ್ವರನ್ನು ಶಂಕರನಾರಾಯಣ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬ್ರಹ್ಮಾವರದ ರಾಜೇಶ್, ಚೇತನ್, ಪ್ರಮೋದ್, ರವೀಂದ್ರ ಕೆ.ಸುವರ್ಣ ಬಂಧಿತರು. ಬಂಧಿತರಿಂದ ರಿಡ್ಜ್ ಕಾರನ್ನು , ಬೇಟೆಗೆ ಬಳಸುವ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಕಾಳಭೈರವ ರಾತ್ರಿ ಗಸ್ತು ತಂಡದವರು ಬುಧವಾರ ಮಧ್ಯರಾತ್ರಿ ಬಿಲ್ಲಾಡಿ ಬ್ಲಾಕ್ ಮೀಸಲು ಅರಣ್ಯದ ಮಧ್ಯದಲ್ಲಿ ಹಾದು ಹೋಗುವ ಶಿರಿಯಾರ – ಮೆಟ್ಕಲಾಣೆ ಡಾಂಬರು ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವಾಗ ರಿಡ್ಜ್ ಕಾರಿನಲ್ಲಿ ಬೇಟೆಗೆ ಬಳಸುವ ಸಾಧನಗಳಿರುವುದನ್ನು ಗಮನಿಸಿದ್ದಾರೆ. ಮೀಸಲು ಅರಣ್ಯದಲ್ಲಿ ವನ್ಯಪ್ರಾಣಿ ಬೇಟೆಗೆ ಪ್ರಯತ್ನಿಸಿರುವ ಬಗ್ಗೆ ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಜಿ.ಲೋಹಿತ್, ಸಹಾಯಕ ಅರಣ್ಯ ಅಂರಕ್ಷಣಾಧಿಕಾರಿ ಹಾಗೂ ಉಪರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರು, ಕುಂದಾಪುರ ಅವರ ಆರ್ಗದರ್ಶನದಂತೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಜೆ, ಮೊಳಹಳ್ಳಿ ಘಟಕ ಅಪವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಜೆ., ಶಿರಿಯಾರ ಗಸ್ತು, ಅರಣ್ಯ ರಕ್ಷಕ ರವೀಂದ್ರ, ಗೋಳಿಯಂಗಡಿ ಗಸ್ತು, ಅರಣ್ಯ ರಕ್ಷಕ ರವಿ, ಕ್ಷೇಮಾಭಿವೃದ್ಧಿ ಅರಣ್ಯ ವೀಕ್ಷಕ ಲಕ್ಷ್ಮಣ, ಪಿಸಿಪಿ ದಿನಗೂಲಿ ನೌಕರ ಸದಾಶಿವ, ವಾಹನ ಚಾಲಕ ಯೋಗೀಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.