ಕರಾವಳಿ

ಕೋಟ : ಕೋಡಿ ಗ್ರಾಮ ಪಂಚಾಯತ್ ಅವ್ಯವಹಾರ ಆರೋಪ ನಿರಾಧಾರ : ಪ್ರಭಾಕರ್ ಕುಂದರ್

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ನಮ್ಮ ಪಂಚಾಯತ್ ನಲ್ಲಿ ನಡೆಯಿತ್ತೆನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಉದಯ್ ಕುಂದರ್ ಆರೋಪಕ್ಕೆ ಯಾವುದೇ ಹುರುಳಿಲ್ಲ. ಇದೊಂದು ರಾಜಕೀಯ ಪ್ರೇರಿತ ಆರೋಪ ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ೨ ತಿಂಗಳಾಯಿತು.ಇದೀಗ ನನ್ನ ಮೇಲೆ ವ್ಯವಸ್ಥಿತ ಪಿತೂರಿ ನಡೆಸುವ ಉದ್ದೇಶದಿಂದ ಈ ರೀತಿ ಅವ್ಯವಹಾರದ ಆರೋಪ ಹೊರಿಸಲಾಗಿದೆ ಎಂದು ಕೋಡಿ ಗ್ರಾ.ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್ ಹೇಳಿದರು.

ಕೋಡಿ ಗ್ರಾಮ ಪಂಚಾಯತ್ ನಲ್ಲಿ ನಡೆಯಿತ್ತೆನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಮ ಹಿತ ರಕ್ಷಣಾ ವೇದಿಕೆ ಆರೋಪದ ಕುರಿತಂತೆ ಕೋಡಿ ಗ್ರಾಮಪಂಚಾಯತ್ ಶುಕ್ರವಾರ ಪತ್ರಿಕಾಗೋಷ್ಠಿಯ ಮೂಲಕ ಸ್ಪಷ್ಟಪಡಿಸಿತು.

Advertisement. Scroll to continue reading.

ಯಾವ ದಿನಗಳಿಂದ ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದೆನೋ ಅಂದಿನಿಂದ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಅವಾಚ್ಯ ಶಬ್ದ ಬಳಸಿ ಹರಿಬಿಟ್ಟಿದ್ದಾರೆ. ಅಲ್ಲದೆ, ನಮ್ಮ ಪಂಚಾಯತ್ ಗೂ ಕಳಂಕ ವೆಸಗಿದ್ದಾರೆ. ದಕ್ಷತೆಯಿಂದ ಆಡಳಿತ ನಡೆಸುವ ಅಧಿಕಾರಿಗಳಿಗೆ ಆಡಳಿತ ನಡೆಸಲು ಈ ಗುಂಪು ಸಮಸ್ಯೆ ನೀಡುತ್ತಿದೆ. ನಮ್ಮೂರಿನಲ್ಲಿ ಇಂತಹ ಕೆಟ್ಟ ಮನಸ್ಥಿತಿಯ ಯುವಕರ ಪಡೆ ಇಲ್ಲ. ಬದಲಾಗಿ ಪ್ರಜ್ಞಾವಂತ ನಾಗರಿಕರ ತಂಡ ಇದೆ. ಇವರ ಹಿಂದೆ ಯಾರು ಇಲ್ಲ, ಹಿಂದಿನ ಅವಧಿಯಲ್ಲಿ ನಡೆದ ಅವ್ಯವಹಾರದ ಕುರಿತು ಉದಯ್ ಕುಂದರ್ ಉಲ್ಲೇಖಿಸಿದ ಆರೋಪದ ಕುರಿಂತೆ ಆ ದಿನಗಳಲ್ಲಿ ಪ್ರಶ್ನಿಸಬೇಕಿತ್ತು. ಇದೀಗ ನಾನು ಅಧ್ಯಕ್ಷನಾದ ನೆಲೆಯನ್ನು ಪ್ರಶ್ನಿಸಿ ಹಗರಣ ನಡೆದಿತ್ತು ಎಂದು ಆರೋಪಿಸುವುದು ಎಷ್ಟು ಸಮಂಜಸ ? ಹಿಂದಿನ ಅವಧಿಯ ಬಗ್ಗೆ ತನಿಖೆ ನಡೆಸಲಿ ಸತ್ಯ ಅಸತ್ಯತೆ ಹೊರಬರಲಿ ಇದೀಗ ಅಧ್ಯಕ್ಷನಾಗಿ ಆಡಳಿತ ನಡೆಸುವ ನನ್ನ ರಾಜಿನಾಮೆ ಕೇಳುವ ವ್ಯಕ್ತಿ ಹತಾಶೆಯ ಮನೋಭಾವನೆಯನ್ನು ಸೃಷ್ಠಿಸಿದೆ. ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಈ ಉದಯ್ ಕುಂದರ್ ಮತ್ತು ಅವನ ತಂಡದಿಂದ ಆಗುತ್ತಿದೆ ಎಂದು ಆರೋಪಿಸಿದರು.

ತಾನೊಬ್ಬ ಈ ಊರಿನಲ್ಲಿ ಮುಖಂಡನಾಗಿ ಬೆಳೆಯಬೇಕೆಂಬ ಕೆಟ್ಟ ಯೋಜನೆ ವಿನಹ ಬೇರಾವುದೇ ಇಲ್ಲ. ಇವನ ಈ ರೀತಿಯ ಹತಾಶೆಯ ಹೇಳಿಕೆಯ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರ ಅಡಗಿದೆ. ಈ ವಿಚಾರವಾಗಿ ಸ್ಥಳೀಯ ಶಾಸಕ, ಸಚಿವರ ಬಳಿ ಸವಿಸ್ತರವಾಗಿ ವಿವರಿಸಿದ್ದು ಕಾನೂನುನಾತ್ವಕ ಹೋರಾಟಕ್ಕೆ ಸಿದ್ಧವಿದ್ದೇನೆ ಎಂದು ಉತ್ತರಿಸಿದರು. ತಾಲೂಕು ಪಂಚಾಯತ್ ಕಾಮಗಾರಿಯ ಬಗ್ಗೆ ತಾಲೂಕು ಪಂಚಾಯತ್ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ ಅದರ ವಿಚಾರವಾಗಿ ಪಂಚಾಯತ್ ಗೆ ಸಂಬಂಧ ಕಲ್ಪಿಸುವುದು ಸಮಂಜಸವಲ್ಲ ಎಂದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡೆನ್ನಿ ಕೋಡ್ರಸ್ ಮಾಹಿತಿ ನೀಡಿ, ಈ ಗ್ರಾಮದ ಅಧಿಕಾರಿಯಾಗಿ ನಿಷ್ಟೆಯಿಂದ ಕೆಲಸ ಮಾಡಿದ್ದೇನೆ. ನಮ್ಮ ಪಂಚಾಯತ್ ಮೇಲೆ ಹೊರಿಸಿದ ಆರೋಪಗಳಿಗೆ ಯಾವುದೇ ರೀತಿಯ ಸತ್ಯಗಳಿಲ್ಲ. ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಮಶಾನದಲ್ಲಿ ವಿಚಾರವಾಗಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಅವರು ಆರೋಪಿಸಿದ 3,17,474 ಆರೋಪ ಬದಲಾಗಿ ಅದರ ೧ಲಕ್ಷದ 20646 ಸಾವಿರ ವ್ಯಯಿಸಿ ಹೊಂಡವಿದ್ದ ಸ್ಥಳಕ್ಕೆ ಮಣ್ಣು ತುಂಬಿಸಿ, ರಸ್ತೆಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಲಾಗಿದೆ.
ಸೋಲಾರ್ ಹಗರಣ ಎಂಬ ಹಣೆ ಪಟ್ಟಿ ಕಟ್ಟುವುದಕ್ಕಿಂದ ಮೊದಲು ನೈಜತೆಯನ್ನು ಪ್ರದರ್ಶಿಸಲಿ. ಪ್ರತಿ ಬಾರಿ ನಮ್ಮ ಗ್ರಾಮಪಂಚಾಯತ್ ವಿಚಾರವಾಗಿ ಮೂಗು ತೋರಿಸುತ್ತಾನೆ. ಅಲ್ಲದೆ ನಮ್ಮ ಪ್ರತಿ ಮಹಿಳಾ ಸಭೆಯಲ್ಲಿ ಬಂದು ಈ ಇಬ್ಬರೂ ಕುಳಿತುಕೊಳ್ಳುತ್ತಾರೆ. ಉದಯ್ ಕುಂದರ್ ಜೊತೆ ಇರುವ ಚೇತನ್ ಪುತ್ರನ್ ಮೂಲತಃ ಬಿಜಾಡಿಯವನಾದ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರ ಪಟ್ಟಿಯಲ್ಲಿ ಅವನ ಹೆಸರಿಲ್ಲ. ಅವನಿಗೆ ನಮ್ಮ ಪಂಚಾಯತ್ ನಲ್ಲಿ ಏನು ಕೆಲಸ ಎಂದು ಪ್ರಶ್ನಿಸಿದರು. ಅಭಿವೃದ್ಧಿ ಅಧಿಕಾರಿಯಾಗಿ ಒರ್ವ ಮಹಿಳೆಯಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ, ಸುಖಾ ಸಮ್ಮನೆ ದೋಷಾರೋಪಣೆ ಹೊರಿಸುತ್ತಿರುವ ಇವರುಗಳ ವಿರುದ್ಧ ಮಹಿಳಾ ಆಯೋಗದ ಮೂಲಕ ದೂರು ನೀಡಲು ಸಿದ್ದನಾಗಿದ್ದೇನೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅನೇಕ ಸುಳ್ಳು ಬರಹಗಳನ್ನು ಹರಿಬಿಡುವ ಇವರ ಕೃತ್ಯಕ್ಕೆ ಅಂತ್ಯ ಹಾಡಬೇಕಿದೆ. ಇಷ್ಟೆಲ್ಲ ಹುರುಳಿಲ್ಲದ ಆರೋಪದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲಿ ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಆರೋಪ ಪ್ರತ್ಯಾರೋಪ :

Advertisement. Scroll to continue reading.

ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿ ತಲೆಯ ಸ್ಮಶಾನ ಅಭಿವೃದ್ದಿ ಕುರಿತಂತೆ ಆರೋಪಿಸಲಾದ 3.17 ಲಕ್ಷ ಅವ್ಯವಹಾರದ ಕುರಿತಂತೆ ಅದರಲ್ಲಿ ಪಾವತಿಸಿದ್ದು, 1,28590 ರೂ. ಹಾಗೇ ಎಸ್ ಎಲ್ ಆರ್ ಘಟಕದ 14 ಲಕ್ಷ ರೂಪಾಯಿಯ ಆಪಾದನೆ ಕುರಿತಂತೆ 6 ಲಕ್ಷ ಮಂಜೂರಾಗಿದ್ದು, ಅದರಲ್ಲಿ 5 ಲಕ್ಷದ 10000 ರೂಪಾಯಿಯ ಗಣ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ವಾಹನ ಖರೀದಿ, ಇನ್ನುಳಿದ ಪರಿಕರಕ್ಕೆ ಬಳಸಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ 2017 – 18 ಸಾಲಿನಲ್ಲಿ ಮಂಜೂರಾದ 10 ಲಕ್ಷ ರೂಪಾಯಿ ಮಂಜೂರು ಆಗಿದ್ದು ಅದು ಇನ್ನು ಕೆಲಸ ಆರಂಭವಾಗಿಲ್ಲ.
ಜಿಲ್ಲಾ ಪಂಚಾಯತಿವತಿಯಿಂದ ಏಪ್ರಿಲ್ ಎಸ್ ಎಲ್ ಆರ್ ಘಟಕಕ್ಕೆ 266868 ಆದರೆ ಅದನ್ನು ನಿರ್ವಯಿಸಲು ಸಾಧ್ಯವಾಗದೆ ಆ ಹಣವನ್ನು ಕೆ.ಆರ್ ಡಿ ಎಲ್ ಹಿಂದುರಿಗಿಸಲಾಯಿತು.
ಸೋಲಾರ್ ಹಗರಣ ಆರೋಪದ ಕುರಿತಂತೆ 1,18,000 ಮಂಜೂರಾಗಿದ್ದು ಟೆಂಡರ್ ಮೂಲಕ 16,000 ರಂತೆ ಒಟ್ಟು 21 ಎಸ್ ಸಿ ಹಾಗೂ ಎಸ್ ಟಿ, ವಿಕಲಚೇತನರಿಗೆ ಬಿಡುಗಡೆಯಾದ ಹಣದಲ್ಲಿ ಅವರ ಕಾಲೋನಿಯಲ್ಲಿ ಸೋಲಾರ್ ದೀಪ ಅಳವಡಿಸಲಾಯಿತು.
ಪಂಚಾಯ್ತ್ ಗೆ 27 ಲಕ್ಷ ಬಂದಿದೆ 5ಲಕ್ಷ 80ಸಾವಿರ ಜಲಜೀವನ್ ಮಿಷನ್‌ನೀಡಲಾಗಿದೆ. ಅಂಗನವಾಡಿ ಕಟ್ಟಡ ರಸ್ತೆ ನಿರ್ಮಾಣ ರಚನೆ, ತಡೆಗೋಡೆ, ದಾರಿದೀಪ,ಕೋಡಿ ಬೇಂಗ್ರೆ ರಸ್ತೆ ಡಾಂಬರೀಕರಣ, ಕೋಡಿ ತಲೆ ರಸ್ತೆ ವಿನಿಯೋಗ ಬಳಸಿಕೊಳ್ಳಲಾಗಿದೆ. ಜನರಲ್ ಕಾಮಗಾರಿಯಲ್ಲಿ 225000 ಕಾಯ್ದಿರಿಸಲಾಗಿದೆ ಎಂದು ಪಿ.ಡಿ.ಓ ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಸತೀಶ್ ಕುಂದರ್,ಗೀತಾ ಕಾರ್ವಿ,ಸ್ಥಳೀಯ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com