ಕರಾವಳಿ

ಕಾಪುವಿನಲ್ಲಿ ರಂಗ ತರಂಗ ತಂಡದ 16 ನೇ ನಾಟಕ‌ “ಅಧ್ಯಕ್ಷೆರ್” ಶುಭ ಮುಹೂರ್ತ

0

ಕಾಪು: ಕರ್ನಾಟಕದ ಕರಾವಳಿಯಲ್ಲಿ ಕಲಾಭಿಮಾನಿಗಳ ಮನರಂಜಿಸುವ ಕಾರ್ಯಕ್ರಮಗಳಲ್ಲೊಂದಾಗಿದೆ ‘ತುಳು ನಾಟಕ’. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಅನೇಕ ತಂಡಗಳು ನಾಟಕ ಪ್ರದರ್ಶನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದು, ಅದರಲ್ಲಿ ಸಮಾಜ ರತ್ನ ಲೀಲಾಧರ ಶೆಟ್ಟಿ ಕಾಪು ಇವರ ಸಾರಥ್ಯದ ರಂಗ ತರಂಗ ನಾಟಕ ತಂಡವು ಒಂದಾಗಿದ್ದು, ಇವರ 16 ನೇ ನಾಟಕ “ಅಧ್ಯಕ್ಷೆರ್” ಇದರ ಶುಭಮುಹೂರ್ತ ಕಾರ್ಯಕ್ರಮವು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ರವಿವಾರ ನಡೆಯಿತು.‌

“ಅಧ್ಯಕ್ಷೆರ್” ನಾಟಕದ ಶುಭಮುಹೂರ್ತ ಕಾರ್ಯಕ್ರಮವನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ವಾಸುದೇವ ಶೆಟ್ಟಿ ಉದ್ಘಾಟಿಸಿದರು. ಪ್ರಮುಖರಾದ ಲೀಲಾಧರ್ ಶೆಟ್ಟಿ ಕಾಪು, ಮನೋಹರ್ ಎಸ್. ಶೆಟ್ಟಿ, ಯೋಗೀಶ್ ಶೆಟ್ಟಿ ಕಾಪು, ಶ್ರೀಕರ ಶೆಟ್ಟಿ ಕಲ್ಯಾ, ನಯೇಶ್ ಪಿ. ಶೆಟ್ಟಿ, ದಿನೇಶ್ ಶೆಟ್ಟಿ ಕಲ್ಯ ಮುಂಬೈ,ಜಯಲಕ್ಷ್ಮೀ ಶೆಟ್ಟಿ,ಶಶಿಪ್ರಭಾ ಶೆಟ್ಟಿ ಹಾಗು ರಂಗ ತರಂಗ ತಂಡದ ಪ್ರಮಖರಾದ ಪ್ರಸನ್ನ ಶೆಟ್ಟಿ ಬೈಲೂರು, ಶರತ್ ಉಚ್ಚಿಲ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸುಜಿತ್ ಶೆಟ್ಟಿ ಕಾಪು ಮತ್ತು ರಂಗತರಂಗ ತಂಡದ ಕಲಾವಿದರು ಉಪಸ್ಥಿತರಿದ್ದರು.

2007 ರಲ್ಲಿ ಹುಟ್ಟಿಕೊಂಡ ರಂಗ ತರಂಗ ತಂಡ, ಕಲಾವಿದರಲ್ಲಿರುವ ಪ್ರತಿಭೆಯನ್ನು ಹೊರ ಹಾಕಿ ಉತ್ತಮ ನಟನೆ ಮಾಡುವ ಮೂಲಕ ಹಲವಾರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ಅಂದಿನಿಂದ ವಿನೂತನ ಸಾಮಾಜಿಕ ಹಾಗೂ ಹಾಸ್ಯಮಯ ನಾಟಕವನ್ನು ದೇಶ ವಿದೇಶಗಳಲ್ಲಿ ಪ್ರದರ್ಶಿಸುತ್ತಾ ಎಲ್ಲರಿಂದಲೂ ಮೆಚ್ಚುಗೆ ಮತ್ತು ಪ್ರಶಂಸೆಗೆ ಪಾತ್ರವಾಗಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com