ಬ್ರಹ್ಮಾವರ : ರೋಟರಿ ಕ್ಲಬ್ ಮಂಗಳೂರು ದಕ್ಷಿಣ ವತಿಯಿಂದ ಹೇರೂರು ಕೊರಗ ಸಮುದಾಯದ ಕುಟುಂಬಗಳಿಗೆ ದಿನನಿತ್ಯಕ್ಕೆ ಬೇಕಾಗುವ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಾಂಪ್ರದಾಯಿಕ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿರುವಂತಹ ಎಸ್ ಎಂ ಎಸ್ ಕಾಲೇಜಿನಲ್ಲಿ ನೌಕರರಾಗಿದ್ದರೂ ಮೂಲ ಪರಂಪರೆಯಿಂದ ಬಂದಂತಹ ಡೋಲು ವಾದ್ಯ ನುಡಿಸುವ ಸತೀಶ್ ಅವರನ್ನು ಸನ್ಮಾನಿಸಲಾಯಿತು.
ಹೇರೂರು ಜಿಲ್ಲಾ ಪಂಚಾಯತ್ ಸದಸ್ಯೆ ವಿನುತಾ, ಕಾರ್ಯದರ್ಶಿ ರೋ. ಶಾಜಿ ಏ. ಕೆ, ನಿಕಟಪೂರ್ವ ಸಹಾಯಕ ಗವರ್ನರ್, ರೋ. ಜೆ. ಕೆ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರೋ. ಸತೀಶ್ ಬೋಳಾರ್, ರೋ. ಗೋಪಾಲಕೃಷ್ಣ ಶೆಟ್ಟಿ, ರೋ. ಜೆ ಪಿ ಶೆಟ್ಟಿ, ರೋ. ನಂದಿನಿ ರಘುಚಂದ್ರ, ರೋ. ಜಗದೀಶ್ ಶೆಟ್ಟಿ, ಸದಸ್ಯರಾದ ರೋ. ಪ್ರಮೋದ ಬೋಲಾರ್, ರೋ. ನಿಖಿಲ್ ಸುವರ್ಣ, ರೋ. ಜಯರಾಮ್, ರೋ. ಚೇತನಾ ಶೆಟ್ಟಿ, ರೋ. ಜಗದೀಶ್ ಬಿ.ಜಿ, ರೋ. ಸುನಿಲ್ ಪಾಲ್ಥಾಡಿ ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.