ಕರಾವಳಿ

ಕೋಟ: ಪ್ರತಿ ಮನೆಯಲ್ಲೂ ಗಿಡನೆಟ್ಟು ಪೋಷಿಸುವ ಕಾರ್ಯ ನಡೆಯಲಿ : ಜಾನಕಿ ಹಂದೆ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಪ್ರತಿ ಮನೆಯಲ್ಲೂ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕಿದೆ ಎಂದು ಕೆ.ಎಂ.ಎಫ್ ನಿರ್ದೇಶಕಿ ಜಾನಕಿ ಹಂದೆ ಕರೆ ನೀಡಿದ್ದಾರೆ. ಕೋಟದ ಪಂಚವರ್ಣ ಯುವಕ ಮಂಡಲದ 83ನೇ ಭಾನುವಾರದ ಪರಿಸರ ಸ್ನೇಹಿ ಕಾರ್ಯಕ್ರಮದ ಸಲುವಾಗಿ ಗೀತಾನಂದ ಫೌಂಡೇಶನ್ ಮಣೂರು ಸಹಸ್ರ ಗಿಡ ನೆಡುವ ಯೋಜನೆ ಹಮ್ಮಿಕೊಂಡಿದ್ದು, ಹಂದಟ್ಟು ಹಾಲು ಉತ್ಪಾಕರ ಮಹಿಳಾ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಗಿಳಿಯಾರು ಯುವಕ ಮಂಡಲ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗಿಡ ವಿತರಿಸಿ ನಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಿಡ ನಡುವ ಜೊತೆಗೆ ಆರೈಕೆ ಮಾಡಿ ತಮ್ಮ ಮುಂದಿನ ಪೀಳಿಗೆಗೆ ಉಸಿರಾಗಿಸುವ ಕೆಲಸ ನಮ್ಮಿಂದಾಗಬೇಕು. ಇಂದಿನ ಆಧುನಿಕ ಯುಗದಲ್ಲಿ ಎಲ್ಲಿ ನೋಡಿದರಲ್ಲಿ ಕಾಂಕ್ರೇಟ್ ವನ ನೋಡುತ್ತಿವೆ. ಇದರಿಂದ ವಾತಾವರಣದಲ್ಲಿ ಏರುಪೇರು ಖಾಯಿಲೆಗಳು ಸೃಷ್ಟಿಯಾಗುತ್ತಿದೆ. ಇದಕ್ಕೆಲ್ಲ ಮುಕ್ತಿಗಾಣಿಸಬೇಕಾದರೆ ಎಲ್ಲರ ಮನೆಯಂಗಳದಲ್ಲಿ ಕನಿಷ್ಠಪಕ್ಷ ಐದಾರು ಗಿಡ ನಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ, ಬಿಜೆಪಿ ಮಹಿಳಾ ಮುಖಂಡೆ ಪುಷ್ಪಾ, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯೆ ವಿದ್ಯಾಸಂದೇಶ ಸಾಲಿಯಾನ್, ಹಂದಟ್ಟು ಹಾಲು ಉತ್ಪಾಕರ ಮಹಿಳಾ ಸಹಕಾರಿ ಸಂಘದ ನಿರ್ದೇಕರಾದ ಸರಸ್ವತಿ, ನಾಗು, ಗಿರೀಜಾ ಪೂಜಾರಿ, ಗಿರೀಜಾ ಮರಕಾಲ್ತಿ, ಹಂದಟ್ಟು ಗೆಳೆಯರ ಬಳಗದ ಕಾರ್ಯದರ್ಶಿ ರಾಜೇಶ್, ವಿಶ್ವವಿನಾಯಕ ವಿವಿದ್ದೋದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಅಮರ್ ಹಂದೆ, ಪಂಚವರ್ಣ ಯುವಕ ಮಂಡಲದ ಭಾಸ್ಕರ್ ದೇವಾಡಿಗ, ಸುಧೀರ್ ಕೊಯ್ಕೂರ್, ನಿತೀನ್ ಕುಮಾರ್ ಕೋಟ, ರವೀಂದ್ರ ಕೋಟ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಸುಜಾತ ಬಾಯಿರಿ ನಿರೂಪಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com