ಕುಂದಾಪುರ : ಕರಾವಳಿಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಪ್ರತೀ ವರ್ಷದ ಗೋಳಿನಂತೆ ಬೇಳೂರು ಧನ್ಯಾಡಿ ಒಳಗಿನ ಮನೆ ಸುತ್ತಲಿನ ಪರಿಸರ ಸಂಪೂರ್ಣ ಜಲಾವೃತವಾಗಿವೆ. ವಾರಾಹಿ ನದಿಯ ಉಪನದಿಗಳಾದ ಸಣ್ಣ ಹೊಳೆ ಮತ್ತು ದೊಡ್ಡ ಹೊಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಪರಿಣಾಮ ಗದ್ದೆಗಳು, ತೋಟಗಳು ಜಲಾವೃತವಾಗಿವೆ. ಪ್ರತೀ ವರ್ಷ ಮಳೆಗಾಲದಲ್ಲಿ ಈ ಭಾಗದ ಜನರು ಸಂಕಷ್ಟ ಅನುಭವಿಸುವುದು ಸಾಮಾನ್ಯವಾಗಿದ್ದು, ಮಳೆಗೆ ಗದ್ದೆಗಳು ಜಲಾವೃತವಾಗುವುದು ಈ ಭಾಗದ ಜನರ ಸಂಕಷ್ಟವಾಗಿಯೇ ಉಳಿದು ಬಂದಿದೆ.