ಕರಾವಳಿ

ಕೋಟತಟ್ಟು ಪಡುಕರೆಯಿಂದ ಕೋಡಿ ಕನ್ಯಾಣದವರೆಗಿನ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಕೆಲವಾರು ವರ್ಷಗಳಿಂದ ಭಾರಿ ಪ್ರಮಾಣದಲ್ಲಿ ಸದ್ದುಮಾಡಿದ ಕರಾವಳಿ ರಸ್ತೆಗೆ ಕೊನೆಗೂ ಮುಕ್ತಿ ದೊರಕಿದೆ. ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆಯಿಂದ ಸಾಲಿಗ್ರಾಮ ಪಟ್ಟಣಪಂಚಾಯತ್ ಮೂಲಕ ಹಾದುಹೋಗುವ ಕೋಡಿ ಕನ್ಯಾಣದವರೆಗಿನ ಕಡಲತಡಿಯ ಸನಿಹದ ರಸ್ತೆ ಕೆಲವಾರು ವರ್ಷಗಳಿಂದ ಹೊಂಡಮಯದಿಂದ ಜನಸಾಮಾನ್ಯರಿಗೆ ಹಾಗೂ ವಾಹನ ಸಂಚಾರಕ್ಕೆ ಬಾರಿ ಕಂಟಕವಾಗಿ ಪರಿಣಮಿಸಿತು. ರಸ್ತೆ ಅಭಿವೃದ್ಧಿ ಕುರಿತಂತೆ ಹಲವು ಪ್ರತಿಭಟನೆಗಳು ನಡೆದುಹೋದವು. ಆದರೆ ಸ್ಥಳೀಯರ ಹೋರಾಟ ಗ್ರಾಮಜನಪ್ರತಿನಿಧಿಗಳ ಒತ್ತಡದ ಮೇರೆಗೆ ಸ್ಥಳೀಯ ಶಾಸಕರ ನಿರ್ದೇಶನದಂತೆ ಆಗಿನ ಮೀನುಗಾರಿಕೆ ಬಂದರು, ಪ್ರಸ್ತುತ ಹಿಂದುಳಿದ ವರ್ಗಗಳ ಕಲ್ಯಾಣ,ಹಿಂದೂ ಧರ್ಮದಾಯದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮುತುವರ್ಜಿಯಲ್ಲಿ ಸುಮಾರು 5ಕಿ.ಮೀ ವರೆಗಿನ ರಸ್ತೆ ಸುಂದರವಾಗಿ ಕಾಂಕ್ರೀಟಿಕರಣಗೊಂಡಿದೆ.
ಸುಮಾರು 7ಕೋಟಿ ರೂ ಗಳ ವೆಚ್ಚದ ಈ ರಸ್ತೆ 6 ಮೀಟರ್ ಅಗಲ ಹೊಂದಿದ್ದು ಜನ ಹಾಗೂ ವಾಹನ ಸಂಚಾರಕ್ಕೆ ಯೋಗ್ಯವಾಗಿ ಸುಂದರ ರಸ್ತೆಯಾಗಿ ಕಂಗೊಳಿಸುತ್ತಿದೆ.

ಹಲವು ಪ್ರತಿಭಟನಾ ಕಾವು ಈ ರಸ್ತೆಗೆ
ಸಾಮಾನ್ಯವಾಗಿ ಸಾಕಷ್ಟು ವಾಹನಗಳು ಸಂಚರಿಸುವ ಈ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿರುವ ಬಗ್ಗೆ ಆರೋಪಗಳು ಆಗಿನ ದಿನಗಳಲ್ಲಿ ಕೇಳಿಬಂದವು.ಇಷ್ಟಾಗಿಯೂ ರಸ್ತೆ ವರ್ಷ ಕಳೆದಂತೆ ಭಾರಿ ಪ್ರಮಾಣದಲ್ಲಿ ಹದೆಗೆಡಲು ಪ್ರಾರಂಭವಾಯಿತು.ಆದರೂ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳಿಗೆ ಅಲ್ಲಿನ ಜನರು ಹಾಗೂ ಆಟೋ, ವಾಹನ ಚಾಲಕರು ಪ್ರತಿಭಟನೆಯ ಬಿಸಿ ಮುಟ್ಟಿಸಿದರು.ಪ್ರತಿಭಟನೆಗೆ ಬಗ್ಗದ ಜನಪ್ರತಿನಿಧಿಗಳಿಗೆ ಚುನಾವಣಾ ಬಹಿಷ್ಕಾರದ ಮುನ್ಸೂಚನೆ ನೀಡಲಾಯಿತು.ಇದಾದ ನಂತರ ಎಚ್ಚತ್ತುಕೊಂಡ ಸ್ಥಳೀಯಾಡಳಿತ ಚುನಾವಣೆ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿಗೆ ಮುಹೂರ್ತ ನಿಗದಿಪಡಿಸಿ ಕಾಮಗಾರಿಗೆ ವೇಗ ನೀಡಲಾಯಿತು.ಆದರೆ ಕಾಮಗಾರಿಗೆ ಹಲವು ತಿಂಗಳು ಬೇಕಾದವು ಆದರೂ ಇದೀಗ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಜನಸಾಮಾನ್ಯರಿಗೆ ಸಂಚರಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

Advertisement. Scroll to continue reading.

ಕಾಮಗಾರಿ ನಿರ್ಮಿತಿ ಕೇಂದ್ರದ ಹೆಗಲಿಗೆ
7ಕೋಟಿ ರೂ ಗಳ ವೆಚ್ಚದ ರಸ್ತೆ ಕಾಮಗಾರಿಯನ್ನು ಉಡುಪಿ ನಿರ್ಮಿತಿ ಕೇಂದ್ರದ ಹೆಗಲಿಗೆ ವಹಿಸಿದ ಸರಕಾರ ಕಾಮಗಾರಿಯ ಬಗ್ಗೆ ಸ್ಥಳೀಯಾಡಳಿತದ ಜನಪ್ರತಿನಿಧಿಗಳ ಕಣ್ಗಾವಲು ನೀಡಲಾಯಿತು.ರಸ್ತೆ ಕಾಮಗಾರಿಯ ಬಗ್ಗೆ ಸಣ್ಣಪುಟ್ಟ ಲೋಪದೋಶಗಳನ್ನು ಹೊರತುಪಡಿಸಿ ಇನ್ನುಳಿದಂತೆ ಕಾಮಗಾರಿಯ ಬಗ್ಗೆ ಸ್ಥಳೀಯರು ಪ್ರಶಂಸೆಯ ನುಡಿಗಳನ್ನಾಡಿದ್ದಾರೆ.

ಹೆಚ್ಚಲಿದೆ ಈ ರಸ್ತೆಯಲ್ಲಿ ಸಂಚಾರ
ಕಳೆದ ಹಲವಾರು ವರ್ಷಗಳಿಂದ ಈ ರಸ್ತೆಯಲ್ಲಿ ಸಂಚರುಸುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸತೋಡಿಗಿತು.ರಸ್ತೆ ಹೊಂಡಮಯದಿಂದ ಸಂಚರಿಸುವರಿಗೆ ತಲೆನೋವಾಗಿ ಪರಿಣಮಿಸಿತು.ಸಾಮಾನ್ಯವಾಗಿ ಕೋಡಿ ,ಕೋಮೆ ಕೋರವಡಿ ಭಾಗದವರೆಗೆ ಸಂಚರಿಸುವ ವಾಹನಗಳು ಕಾಲಕ್ರಮೇಣ ದಿಕ್ಕು ಬದಲಿಸಲು ಪ್ರಾರಂಭಿಸಿ ಕೋಡಿ ಮುಖವಾಗಿ ಸಂಚರಿಸುವರು ಸಾಲಿಗ್ರಾಮದ ಮಂಟಪ ಸನಿಹರಸ್ತೆ ಆಯ್ಕೆ ಮಾಡಿಕೊಂಡರು. ಕೊಮೆ,ಕೊರವಡಿ ಸಂಚರಿಸುವವರು ತೆಕ್ಕಟ್ಟೆ ಕೊಮೆ ನಾಗಬನ ರಸ್ತೆಯನ್ನು ಆಯ್ಕೆಗೊಳಿಸಿ ಸಂಚರುಸಲು ಪ್ರಾರಂಭಿಸಿದರು ಇದಾದ ನಂತರ ಇದೀಗ ಈ ರಸ್ತೆಗೆ ಹೆಚ್ಚಿನ ಸಂಚಾರ ಕಾಣಬಹುದಾಗಿದೆ.ಒಟ್ಟಿನಲ್ಲಿ ಎಷ್ಟೊ ವರ್ಷಗಳ ಕಾಂಕ್ರೀಟ್ ರಸ್ತೆ ಕನಸು ಗ್ರಾಮಸ್ಥರಿಗಿಗ ನನಸಾಗಿದೆ ಎಂದರೆ ಅತಿಶಯೋಕ್ತಿಯಲ್ಲ.


ಶಿವರಾಮ್ (ಅಣ್ಣಪ್ಪ) ಪೂಜಾರಿ ಪಡುಕರೆ ಕೋಟ ರಿಕ್ಷಾ ಚಾಲಕಮಾಲಕ ಸಂಘದ ಅಧ್ಯಕ್ಷರು

ಕಳೆದ ಹಲವಾರು ವರ್ಷಗಳಿಂದ ನೆನೆಗುದ್ದಿಗೆ ಈ ರಸ್ತೆಗೆ ಶಾಸಕರ ಹಾಲಾಡಿ ಶ್ರೀನಿವಾಸ ಶಿಫಾರಸಿನ ಮೇರೆಗೆ ಆಗಿನ ಮೀನುಗಾರಿಕಾ ಸಚಿವ ಪ್ರಸ್ತುತ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ 7ಕೋಟಿ ಬಿಡುಗಡೆಗೊಳಿಸಿ ಇದೀಗ ಸುಸಜ್ಜಿತ ರಸ್ತೆಯಾಗಿ ನಿರ್ಮಾಣಗೊಂಡಿದೆ.ರಸ್ತೆ ಕಾಮಗಾರಿಯ ಲೋಪದ ಆರೋಪದ ಕುರಿತಂತೆ ಸಣ್ಣಪುಟ್ಟ ಲೋಪದೋಷಗಳು ಬರಲು ಇಲ್ಲಿನ ಸಮುದ್ರಕ್ಕೆ ತಡೆಗೋಡೆ ನಿರ್ಮಿಸಲು ಸಲುವಾಯ ಬೃಹತ್ ಕಲ್ಲುಗಳನ್ನು ಹೊತ್ತೋಯ್ದ ಲಾರಿಗಳ ಅವಾಂತರದಿಂದ ಸಮಸ್ಯೆ ಸೃಷ್ಠಿಯಾಗಿರಬಹುದು .ಇನ್ನುಳಿದಂತೆ ಕಾಮಗಾರಿ ಉತ್ತಮವಾಗಿದೆ.

ರಘು ತಿಂಗಳಾಯ ಪಡುಕರೆ, ಮಾಜಿ ಅಧ್ಯಕ್ಷರು ಕೋಟತಟ್ಟು ಗ್ರಾಮಪಂಚಾಯತ್

ಗ್ರಾಮಸ್ಥರ ಹೋರಾಟದ ಫಲವಾಗಿ ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಈ ರಸ್ತೆಗೆ ಹಲವು ಬಾರಿ ಮನವಿಯ ಮೇರೆಗೆ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಿಫಾರಸ್ಸಿನನ್ವಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಬಹುವರ್ಷಗಳ ಕನಸನ್ನು ನನಸಾಗಿಸಿದ್ದಾರೆ.ಇರ್ವರು ಜನಪ್ರತಿನಿಧುಗಳಿಗೆ ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸುತ್ತೇನೆಮುಂದಿನ ದಿನಗಳಲ್ಲಿ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಲು ಸಹಕಾರವನ್ನು ಶಾಸಕ ಹಾಗೂ ಸಚಿವರಲ್ಲಿ ಮನವಿ ಮಾಡುತ್ತೇನೆ.


Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com