ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : 17ನಿಮಿಷ 49ಸೆಕೆಂಡ್ ಗಳಲ್ಲಿ 170 ಯೋಗಾಸನದ ರಾಜ ಸೂರ್ಯ ನಮಸ್ಕಾರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಮಾಡಿದ ಪೆರಂಪಳ್ಳಿ ರೇಣುಕಾ ಗೋಪಾಲಕೃಷ್ಣ ಅವರನ್ನು ಬ್ರಹ್ಮಾವರ ನವಕಿರಣ ನವತಾರೆ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ಭಂಟರ ಭವನದಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಅವರು ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, 20 ವರ್ಷದ ಹಿಂದೆ ನಾನು ಜಿಲ್ಲಾ ಪಂಚಾಯತಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಜಿಲ್ಲೆಯ ಪ್ರತೀ ಪ್ರಾಥಮಿಕ ಶಾಲೆಯಲ್ಲಿ ಯೋಗದ ತರಗತಿಯನ್ನು ಮಾಡುವಂತೆ ಆದೇಶ ಮಾಡಿದ್ದೆ. ಯೋಗವನ್ನು ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಮಟ್ಟಕ್ಕೆ ಪರಿಚಯಿಸಿ ಭಾರತದ ಪುರಾತನ ಆರೋಗ್ಯ ತತ್ವವನ್ನು ತಿಳಿಸಿದ್ದಾರೆ. ಈ ತಂಡದ ಸದಸ್ಯೆ ಇಂದು ಯೋಗದ ದಾಖಲೆ ಮಾಡಿ ಕೀರ್ತಿ ತಂದಿದ್ದಾರೆ ಎಂದರು.
Advertisement. Scroll to continue reading.
ಇದೇ ಸಂದರ್ಭದಲ್ಲಿ 26 ನೇ ವರ್ಷದ ಹಿಂದೆ ಈ ವೇದಿಕೆಯನ್ನು ಸ್ಥಾಪಿಸಿರುವ ಅಧ್ಯಕ್ಷ ಉಮೇಶ್ ಪೂಜಾರಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಗಿರೀಶ್ ಪೂಜಾರಿ, ಮಂದಾರ ಶೆಟ್ಟಿ ಬ್ರಹ್ಮಾವರ, ಸದಾಶಿವ, ಇಂದಿರಾ, ಸನ್ಮಾನಿತರ ಪತಿ ಕೋಸ್ಟಲ್ ಸೆಕ್ಯುರಿಟಿ ಪೋಲಿಸ್ ಆಫೀಸರ್ ಗೋಪಾಲಕೃಷ್ಣ, ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.