ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕರೋನಾ ಬಿಕ್ಕಟ್ಟಿನಿಂದ ಮುಂದೂಡಲಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆ ಸೋಮವಾರ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಬಹಳ ಹುಮ್ಮಸ್ಸಿನಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದರು. ಕುಂದಾಪುರ ವಲಯದಲ್ಲಿ ಸಿದ್ದಾಪುರ ೨, ಶಂಕರನಾರಾಯಣ ೨, ಬಸ್ರೂರು ೨, ಬಿದ್ಕಲ್ ಕಟ್ಟೆ ೧, ತೆಕ್ಕಟ್ಟೆ, ಕುಂದಾಪುರ, ಗಂಗೊಳ್ಳಿ ಒಟ್ಟು ೧೩ ಕೇಂದ್ರದಲ್ಲಿ ೩,೮೧೪ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಯಾನಿಂಗ್ ಮಾಡಿ ಒಳಗೆ ಪ್ರವೇಶ ನೀಡಲಾಯಿತು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ ಪದ್ಮನಾಭ ಶೆಣೈ ಅವರು ಮಾತನಾಡಿ, ಈ ಬಾರಿಯ SSLC ಪರೀಕ್ಷೆಯಲ್ಲಿ ಸುಮಾರು 3814 ಮಂದಿ ವಿದ್ಯಾರ್ಥಿಗಳು ಕುಳಿತು ಕೊಂಡಿದ್ದು 13 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಪ್ರತಿ ಕೊಠಡಿಯಲ್ಲಿ ತಲಾ 1 ಬೆಂಚಿ ನಲ್ಲಿ 1 ವಿದ್ಯಾರ್ಥಿಯಂತೆ 12 ಮಕ್ಕಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, 5 ಮಾರ್ಗ ಅಧಿಕಾರಿ ಹಾಗೂ ಸ್ಥಾನಿಕ ಜಾಗೃತ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಯಾವುದೇ ವಿದ್ಯಾರ್ಥಿಗೆ ಪ್ರಯಾಣಕ್ಕೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆಯನ್ನು ಕರ್ನಾಟಕ ಸರಕಾರ ಮಾಡಿದೆ. ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ರಾಜ್ಯ ಸರಕಾರ ಆದೇಶ ನೀಡಿದ್ದು ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬಾರದು ಎಂದರು. ತೀರ ಒಳಭಾಗದ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರಕ್ಕೆ ಬರಲು ಕಷ್ಟವಾಗುವ ವಿದ್ಯಾರ್ಥಿಗಳಿಗೆ ದಾನಿಗಳ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಾರಿಗೆಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಿದ್ದಾಪುರದಲ್ಲಿ 2 ಕೇಂದ್ರ :ಸರಕಾರಿ ಪ್ರೌಢ ಶಾಲೆ, ಸರಸ್ವತಿ ವಿದ್ಯಾ ಕೇಂದ್ರ
ಶಂಕರನಾರಾಯಣ 2 ಕೇಂದ್ರ: ಮದರ್ ತೆರೆಸಾ, ಸರಕಾರಿ ಪ.ಪೂ. ಕಾಲೇಜ್
ಬಸ್ರೂರು 2 ಕೇಂದ್ರ: ಶಾರದವಿದ್ಯಾನೀಕೇತನ, ಸರಕಾರಿ ಶಾಲೆ
ಬಿದ್ಕಲ್ಕಟ್ಟೆ 1 ಕೇಂದ್ರ, ಕೋಟೇಶ್ವರ 1 ಕೇಂದ್ರ, ತೆಕ್ಕಟ್ಟೆ 1 ಕೇಂದ್ರ, ಗಂಗೊಳ್ಳಿ 1 ಕೇಂದ್ರ, ವೆಂಕಟರಮಣ ಶಾಲೆ 1 ಕೇಂದ್ರ, ಸೈಂಟ್ ಫಿಲೋಮಿನಾ ಕಾಲೇಜ್, ಮದರ್ ಥೆರೇಸಾ ಕಾಲೇಜು ಸೇರಿದಂತೆ ಒಟ್ಟು 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
Advertisement. Scroll to continue reading.