ಹೆಬ್ರಿ : ಹೈಕೋರ್ಟ್ ನ್ಯಾಯಾಧೀಶರಿಂದ ಹೊಸ ನ್ಯಾಯಾಲಯಕ್ಕೆ ಸ್ಥಳ ಪರಿಶೀಲನೆ
Published
0
ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಸುರಾಜ್ ಗೋವಿಂದ್ ರಾಜ್ ಅವರು ಹೆಬ್ರಿಗೆ ಭೇಟಿ ನೀಡಿ ಹೆಬ್ರಿ ತಾಲೂಕಿಗೆ ಹೊಸ ನ್ಯಾಯಾಲಯಕ್ಕೆ ಸ್ಥಳ ಪರಿಶೀಲನೆ ನಡೆಸಿದರು. ಚಾರ ಗ್ರಾಮ ಪಂಚಾಯತ್ ಬಳಿ ಸರ್ವೇ ನಂಬ್ರ 159 ರಲ್ಲಿ ಸುಮಾರು 5 ಎಕ್ರೆ ಜಾಗವನ್ನು ನ್ಯಾಯಾಲಯದ ಸಂಕಿರ್ಣ ಕ್ಕೆ ಗುರುತಿಸಿ ಮುಂದಿನ ಕ್ರಮದ ಬಗ್ಗೆ ಕಳುಹಿಸಿ ಕೊಡುವಂತೆ ತಿಳಿಸಿದರು.
ಈ ವೇಳೆ ಉಡುಪಿ ಜಿಲ್ಲಾ ಸತ್ರ ನ್ಯಾಯಧೀಶ ಸುಬ್ರಮಣ್ಯ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾರ್ಕಳ ತಹಶೀಲ್ದಾರ್ ಪ್ರಕಾಶ್, ಹೆಬ್ರಿ ಆರ್ ಐ ಹಿತೇಶ್, ಹೆಬ್ರಿ ಗ್ರಾಮ ಲೆಕ್ಕಾಧಿಕಾರಿ ನವೀನ್ ಉಪಸ್ಥಿತರಿದ್ದರು.