ಕರಾವಳಿ

ಬ್ರಹ್ಮಾವರ: ಕೊರೋನಾ ಸಂಕಷ್ಟದಲ್ಲಿ ಸಮಾಜಪರ ಚಟುವಟಿಕೆಗಳಲ್ಲಿ ತೊಡಗಿಕೊಂಡ ಸಂಘ – ಸಂಸ್ಥೆಗಳಿಗೆ ಗೌರವ ಸಮರ್ಪಣೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಬಿಲ್ಲವ ಸೇವಾ ಸಂಘ ಬಾರ್ಕೂರು ಇವರ ಆಶ್ರಯದಲ್ಲಿ ಕೊರೋನಾ ಸಂಕಷ್ಟ ಸಮಯದಲ್ಲಿ ಸಮಾಜಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯ ಸಂಘ-ಸಂಸ್ಥೆಗಳಾದ ರೋಟರಿ ಕ್ಲಬ್ , ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವಿಪತ್ತು ನಿರ್ವಹಣಾ ಘಟಕ ಬಾರ್ಕೂರು ಇದರ ಸದಸ್ಯರನ್ನು ಮತ್ತು ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಗುರುವಾರ ನಡೆಯಿತು.

ರೋಟರಿ ಕ್ಲಬ್ ಬಾರ್ಕೂರು ಪರವಾಗಿ ನಿಕಟಪೂರ್ವ ಅಧ್ಯಕ್ಷ ರೋಟೇರಿಯನ್ ವಾಸುದೇವ ಶೆಟ್ಟಿ ಹಾಗೂ ಪ್ರಸ್ತುತ ಅಧ್ಯಕ್ಷರಾದ ರೋಟೇರಿಯನ್ ಚರಣ್. ಬಿ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣಾ ಘಟಕ ಬಾರ್ಕೂರು ಇದರ ಪರವಾಗಿ ಮಂಜುನಾಥ ಪೂಜಾರಿ ಹೊಸಾಳ ಮತ್ತು ವಿಮಲ್ ಕುಮಾರ್ ಹೊಸಾಳ, ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್ ನ ಪರವಾಗಿ ಆನಂದ್ ಕುಮಾರ್ ಬಾರ್ಕೂರು ಮತ್ತು ಬಾರ್ಕೂರಿನ ಹಿರಿಯರಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ಬಿ. ಸುಧಾಕರ ರಾವ್ ಅವರನ್ನು ಹಾಗೂ ಬಾರ್ಕೂರಿನ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ(ನಿ) ಇದರ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ವರ್ಗ ಮತ್ತು ಬಾರಕೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com