ಬ್ರಹ್ಮಾವರ : ಬ್ರಹ್ಮಾವರ ರೋಟರಿ ಕ್ಲಬ್ ವತಿಯಿಂದ ಪರಿಸರ ಸಂರಕ್ಷಣೆ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರ ಭಾಗದಲ್ಲಿ ಹಣ್ಣು ಮತ್ತು ಫಲ ಬರುವ ಸಸಿಗಳನ್ನು ಉಚಿತವಾಗಿ ಸೋಮವಾರ ಸಂಜೆ ವಿತರಿಸಲಾಯಿತು. ಸೀತಾಫಲ, ಸೀಬೆ, ಪುನರ್ ಪುಳಿ, ಚಿಕ್ಕು, ಹಲಸು, ಮಾವು ಸೇರಿದಂತೆ ಅನೇಕ ಜಾತಿಯ 800 ಗಿಡಗಳನ್ನು ವಿತರಿಸಲಾಯಿತು. ಸಾರ್ವಜನಿಕರು ಅತೀ ಆಸಕ್ತಿಯಿಂದ ಪಡೆದುಕೊಂಡರು.
ಟೆಂಪೋ ವೊಂದರಲ್ಲಿ ಗಿಡಗಳನ್ನು ತುಂಬಿಸಿ ನಗರದ ನಾನಾ ಭಾಗದಲ್ಲಿ ಧ್ವನಿ ವರ್ಧಕದ ಮೂಲಕ ರೋಟರಿ ಸದಸ್ಯ ಆಲ್ವಿನ್ ಅಂದ್ರಾದೆ ಪ್ರಚಾರ ಮಾಡುತ್ತಿದ್ದು , ಸಾರ್ವಜನಿಕರ ಬಳಿಗೆ ಕೊಂಡು ಹೋಗಿ ಸಸಿಗಳನ್ನು ನೀಡಿದ ಕುರಿತು ಅನೇಕ ಜನರು ಮೆಚ್ಚುಗೆ ವ್ಯಕ್ತ ಪಡಿಸಿದರು. ಬ್ರಹ್ಮಾವರ ರೋಟರಿ ಅಧ್ಯಕ್ಷ ಹರೀಶ್ ಕುಂದರ್, ಕಾರ್ಯದರ್ಶಿ ಸತೀಶ್ ಶೆಟ್ಟಿ ಝೋನ್ 3 ರ ಅಸಿಸ್ಟೆಂಟ್ ಗರ್ವನರ್ ಪಧ್ಮನಾಭ ಕಾಂಚನ್ ಇನ್ನಿತರ ಸದಸ್ಯರು ಹಾಜರಿದ್ದರು.