ವರದಿ : ದಿನೇಶ್ ರಾಯಪ್ಪನಮಠ
ಕೋಟ : ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಹೊಳೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕೋಳಿ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಎಸೆಯಲ್ಪಡುತ್ತಿದೆ. ಕೋಳಿಗಳನ್ನು ಎಸೆಯುವ ಕೋಳಿ ಫಾರಂಗಳಿಂದಾಗಿ ಹೊಳೆ ಮಲೀನಗೊಳ್ಳುವುದಲ್ಲದೇ, ಇಲ್ಲಿನ ಪರಿಸರಕ್ಕೆ ಗಬ್ಬು ವಾಸನೆ ಬೀರುತ್ತಿತ್ತು. ಏಪ್ರಿಲ್ 25 ರಂದು ಭಾರೀ ಕೋಳಿ ತ್ಯಾಜ್ಯ ಇಲ್ಲಿ ಎಸೆದಿರುವುದನ್ನು ಗಮನಿಸಿದ ಸ್ಥಳೀಯ ಆಶಾ ಕಾರ್ಯಕರ್ತೆ ಶ್ಯಾಮಲ ಮೂಲಕ ಸ್ಥಳೀಯ ಪಟ್ಟಣಪಂಚಾಯತ್ ತ್ಯಾಜ್ಯ ತೆರವುಗೊಳಿಸಿದ್ದರು. ಇದೀಗ ತ್ಯಾಜ್ಯ ಎಸೆಯುವವರು ರೆಡ್ ಹ್ಯಾಂಡ್ ಆಗಿ ಸಿಕಿಬಿದ್ದಿದ್ದಾರೆ.

ಟೆಂಪೋ ಮೂಲಕ ತ್ಯಾಜ್ಯ ಸುರಿಯುತ್ತಿದ್ದ ಕಿಡಿಗೇಡಿಗಳು
ಭಾನುವಾರ ಪೂರ್ವಾಹ್ನ 6 ಗಂಟೆಗೆ ಸಾಲಿಗ್ರಾಮ ಚಿತ್ರಪಾಡಿ ಗಿರಿಮುತ್ತು ಕೋಳಿ ಫಾರ್ಮ್ ಮಾಲೀಕ ಅರುಣ್ ಕುಂದರ್ ಅವರಿಗೆ ಸೇರಿದ ಕೋಳಿ ಫಾರಂನ ಕೋಳಿ ತ್ಯಾಜ್ಯವನ್ನು ಏಸ್ ಟೆಂಪೆÇೀ ಒಊ. 04 ಇಐ 5882ನಲ್ಲಿ ತಂದು ಹೊಳೆಗೆ ಹಾಕುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ. ಸ್ಥಳೀಯ ಆಶಾ ಕಾರ್ಯಕರ್ತೆ ಶ್ಯಾಮಲ ಪೂಜಾರಿ ಅವರ ಸಮಯಪ್ರಜ್ಞೆಯಿಂದ ಕಿಡಿಗೇಡಿಗಳು ಕೋಳಿ ತ್ಯಾಜ್ಯವನ್ನು ಹೊಳೆಗೆ ಎಸೆಯುತ್ತಿರುದನ್ನು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿ ಸ್ಥಳೀಯರ ಸಹಾಯದಿಂದ ಕಿಡಿಗೇಡಿಗಳನ್ನು ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಅಲ್ಲದೇ, ಪಟ್ಟಣ ಪಂಚಾಯತ್ ನ ಉಪಾಧ್ಯಕ್ಷರು ಅನುಸೂಯ ಆನಂದರಾಮ ಹೇರ್ಳೆ ಸ್ಥಳಕ್ಕಾಗಮಿಸಿ ಗಿರಿಮುತ್ತು ಕೋಳಿ ಫಾರ್ಮ್ ನ ಪರವಾನಿಗೆ ರದ್ದುಮಾಡುವುದಾಗಿ ಹೇಳಿದರು.


ತ್ಯಾಜ್ಯ ಎಸೆದರೆ ಲೈಸೆನ್ಸ್ ರದ್ದು – ಅರುಣ್ ಬಿ.
ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅರುಣ್ ಬಿ. ಮಾತನಾಡಿ,
ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕೋಳಿ ತ್ಯಾಜ್ಯ ಎಸೆಯುವರಿಗೆ ನಮ್ಮ ಪಟ್ಟಣಪಂಚಾಯತ್ ಮೂಲಕ ಲೈಸೆನ್ಸ್ ರದ್ದುಗೊಳಿಸುವ ಅಥವಾ ಅಮಾನತ್ತಿನಲ್ಲಿಟ್ಟು ಅತ್ಯಧಿಕ ದಂಡ ವಿಧಿಸುವ ಕಾನೂನು ಶೀಘ್ರ ಜಾರಿಗೆ ತರಲಾಗುವುದು ಅಲ್ಲದೆ ಚಿತ್ರಪಾಡಿ ಕೋಳಿ ಅಂಗಡಿಗೂ ಸೋಮವಾರ ಪಂಚಾಯತ್ ಕರೆಸಿ ದಂಡ ಹಾಗೂ ಲೈಸೆನ್ಸ್ ಅಮಾನತ್ತಿನಲ್ಲಿಡಲು ಬೋಡ್9 ಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿಪಿ ಅವರು, ತ್ಯಾಜ್ಯ ಎಸೆಯುವರಿಗೆ ತಮ್ಮ ಇಲಾಖೆ ಕಟ್ಟುನಿಟ್ಡಿನ ಕ್ರಮ ಕೈಗೊಳ್ಳುತ್ತದೆ. ಅದರ ಜೊತೆ ಸ್ಥಳೀಯಾಡಳಿತ ಕಠಿಣ ಕಾನೂನು ರೂಪಿಸಬೇಕಾದ ಅವಶ್ಯಕತೆ ಇದೆ ಎಂದರು.
ಆಶಾ ಕಾರ್ಯಕರ್ತೆ ಶ್ಯಾಮಲ ಪೂಜಾರಿ ಅವರ ಸಮಯಪ್ರಜ್ಞೆಯನ್ನು ಸ್ಥಳೀಯರು ಕೊಂಡಾಡಿದ್ದು ಸ್ಥಳೀಯರಿಂದ ತುಂಬಾ ಶ್ಲಾಘನೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಅನುಸೂಯ ಆನಂದರಾಮ ಹೇರ್ಳೆ, ಸದಸ್ಯರಾದ ರೇಖಾ ಕೇಶವ ಕರ್ಕೇರ, ಆಶಾ ಕಾರ್ಯಕರ್ತೆ ಶ್ಯಾಮಲ ಪೂಜಾರಿ, ಕೋಟ ಆರಕ್ಷಕ ಠಾಣಾ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸ್ಥಳದಲ್ಲಿದ್ದರು.