ಮಂಗಳೂರು : ಸೋಮವಾರದಿಂದ ಪದವಿ ಪರೀಕ್ಷೆ ಪ್ರಾರಂಭಗೊಂಡಿದ್ದು ಪರೀಕ್ಷೆಗಳು ಕೂಡಲೇ ರದ್ದುಗೊಳ್ಳಬೇಕು ಹಾಗೂ ತರಗತಿಗಳು ಮುಂದೂಡಬೇಕು ಎಂದು ಮಂಗಳೂರು ವಿವಿಯ ಮೌಲ್ಯಮಾಪನದ ರೆಜಿಸ್ಟರ್ ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ. ವಿ. ರಾಜೇಂದ್ರ ಪತ್ರ ಬರೆದಿದ್ದಾರೆ.
ನಗರದಲ್ಲಿ ಕೊರೋನಾ ಹೆಚ್ಚುತ್ತಿದ್ದು, ಇದರ ನಡುವೆ ಪದವಿ ಪರೀಕ್ಷೆಗಳು ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ಅಂತಕ ಹೆಚ್ಚಿಸಿದೆ. ಹೆಚ್ಚಿನ ವಿದ್ಯಾರ್ಥಿಗಳು ವಿಧ್ಯಾಭ್ಯಾಸಕ್ಕಾಗಿ ಕೇರಳದ ಕಾಸರಗೋಡುಗಳಿಂದ ಮಂಗಳೂರು ನಗರದ ಕಾಲೇಜ್ ಗೆ ಬರುತ್ತಿದ್ದಾರೆ. ಕೇರಳದಲ್ಲಿ ಈಗಾಗಲೇ ಸೋಂಕು ಹೆಚ್ಚುತ್ತಲಿದ್ದು, ಪ್ರಯಾಣದ ವೇಳೆ ಸೋಂಕು ಹರಡುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಸರಕಾರ ರಾಜ್ಯದ ಎಲ್ಲ ಗಡಿ ಭಾಗದಲ್ಲಿ ತಪಾಸಣೆ ಆರಂಭಿಸಿದೆ.
ಸದ್ಯದ ಮಟ್ಟಿಗೆ ಪರೀಕ್ಷೆಗಳನ್ನು ಸ್ಥಗಿತಗೊಳಿಸಬೇಕು. ಮುಂದಿನ ಆದೇಶದ ವರೆಗೆ ಯಾವುದೇ ಪರೀಕ್ಷೆ ಹಾಗೂ ತರಗತಿ ನಡೆಸಬಾರೆದೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಆ.4 ರಿಂದ ಎಲ್ಲಾ ಪರೀಕ್ಷೆಗಳು ತಾತ್ಕಾಲಿಕವಾಗಿ ರದ್ದಾಗಿದೆ ಎಂದು ಮಂಗಳೂರು ವಿಶವವಿದ್ಯಾನಿಲಯ ರೆಜಿಸ್ಟರ್ ಪಿ. ಎಲ್.ಧರ್ಮ ತಿಳಿಸಿದ್ದಾರೆ.
