ಉಡುಪಿ : ನಿಟ್ಟೂರು ಪ್ರೌಢ ಶಾಲೆಯಲ್ಲಿ ಕಛೇರಿ ಸಹಾಯಕಿ ಮತ್ತು ಗ್ರಂಥಾಲಯ ಪಾಲಕಿಯಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ಕಳೆದ ಎಪ್ರಿಲ್ ತಿಂಗಳ 30 ರಂದು ನಿವೃತ್ತರಾದ ಮನೋರಮಾ ಅವರನ್ನು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ, ಶಾಸಕ ರಘುಪತಿ ಭಟ್ ಸನ್ಮಾನಿಸಿದರು.
ಈ ಸಂದರ್ಭ ಶಾಲೆಯ ನಿವೃತ್ತ ಮುಖ್ಯೋಪಾಧ್ಯಯ ಪಿ.ವೇಣುಗೋಪಾಲ ಆಚಾರ್ಯ, ಎಸ್.ವಿ.ಭಟ್, ಭಾಸ್ಕರ ಡಿ.ಸುವರ್ಣ, ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಅನಸೂಯ ಸ್ವಾಗತಿಸಿದರು.ದೇವದಾಸ ಶೆಟ್ಟಿ ಮಾನಪತ್ರ ವಾಚಿಸಿದರು. ಶಿಕ್ಷಕ ಹೆಚ್.ಎನ್.ಶ್ರಂಗೇಶ್ವರ ಕಾರ್ಯಕ್ರಮ ನಿರೂಪಿಸಿದರು. ನಮಿತಾಶ್ರೀ ವಂದಿಸಿದರು.
Advertisement. Scroll to continue reading.