Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಯಕ್ಷಗಾನ ಕಲಾರಂಗದ 46 ನೇ ವಾರ್ಷಿಕ ಮಹಾಸಭೆ

0


ಉಡುಪಿ : ಸಂಸ್ಥೆಯ 46ನೆಯ ವಾರ್ಷಿಕ ಮಹಾಸಭೆಯು ಶನಿವಾರ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ನಡೆಯಿತು. ಈ ವೇಳೆ ಅಗಲಿದ ಸಂಸ್ಥೆಯ ಸದಸ್ಯರು ಮತ್ತು ಕಲಾವಿದರಿಗೆ ಉಪಾಧ್ಯಕ್ಷ ಎಸ್.ವಿ.ಭಟ್ ನುಡಿನಮನ ಸಲ್ಲಿಸಿದರು. ಎಂ. ಗಂಗಾಧರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜತೆ ಕಾರ್ಯದರ್ಶಿ ಹೆಚ್.ಎನ್ ಶೃಂಗೇಶ್ವರ ಗತಸಭೆಯ ವರದಿ ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯದರ್ಶಿ ವರದಿ ವಾಚಿಸಿದರು. ಕೋಶಾಧಿಕಾರಿ ಮನೋಹರ್ ಕೆ. ಯಕ್ಷಗಾನ ಕಲಾರಂಗ ಹಾಗೂ ಯಕ್ಷನಿಧಿಯ ಪರಿಶೋಧಿತ ಲೆಕ್ಕಪತ್ರವನ್ನೂ ಹಾಗೂ ಪ್ರೊ. ಸದಾಶಿವ ರಾವ್ ವಿದ್ಯಾಪೋಷಕ್‍ನ ಪರಿಶೋಧಿತ ಲೆಕ್ಕಪತ್ರವನ್ನು ಮಂಡಿಸಿದರು. 2021-22ನೆಯ ಸಾಲಿಗೆ ಸಿ.ಎ ರಾಜಾರಾಮ ಶೆಟ್ಟಿಯವರನ್ನು ಲೆಕ್ಕ ಪರಿಶೋಧಕರನ್ನಾಗಿ ನೇಮಕ ಮಾಡಲಾಯಿತು. ಈ ಎಲ್ಲ ಕಲಾಪಗಳು ಸದಸ್ಯರ ಸೂಚೆನೆ ಹಾಗೂ ಅನುಮೋದನೆಯೊಂದಿಗೆ ಅಂಗೀಕಾರಗೊಂಡವು. 2021-22ನೆಯ ಸಾಲಿನ ಕಾರ್ಯಕಾರ ಸಮಿತಿಗೆ ಹಾಗೂ ಆಹ್ವಾನಿತ ಸದಸ್ಯರನ್ನು ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಗೆ ದೊಡ್ಡ ಮೊತ್ತ ನೀಡಿದ ಸುಕೇಶ್ ಕುಮಾರ್ ಕೆ. ಇವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!