Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ದಿ.ಮಾಬುಕಳ ಕೃಷ್ಣ ಕಿಣಿ ಸ್ಮರಣಾರ್ಥ ಉಚಿತ ನೇತ್ರ ತಪಾಸಣಾ ಶಿಬಿರ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಸಹಕಾರಿ ಧುರೀಣ, ಸಜ್ಜನ ರಾಜಕಾರಿಣಿ ದಿವಂಗತ ಮಾಬುಕಳ ಕೃಷ್ಣ ಕಿಣಿಯವರ ಸಂಸ್ಮರಣೆ ಅಂಗವಾಗಿ ಬ್ರಹ್ಮಾವರ ಬಂಟರ ಭವನದಲ್ಲಿ ಭಾನುವಾರ ಉಡುಪಿ ಪ್ರಸಾದ್ ನೇತ್ರಾಲಯದ ಡಾ. ಕೃಷ್ಣ ಪ್ರಸಾದ್ ಕೂಡ್ಲು ಇವರ ವೈದ್ಯಕೀಯ ತಂಡದವರಿಂದ ಉಚಿತ ನೇತ್ರ ತಪಾಸಣಾ ಶಿಬಿರ ಜರುಗಿತು.


ಶಿಬಿರ ಮತ್ತು ಸಂಸ್ಮರಣೆ ಉದ್ಘಾಟನೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಕೃಷ್ಣ ಕಿಣಿಯವರ ಸಂಸ್ಮರಣೆ ನುಡಿಯಲ್ಲಿ ಮಾತನಾಡಿ, ಉಡುಪಿ ಭಾಗದಲ್ಲಿ ಸಜ್ಜನರನ್ನು ಒಂದು ಗೂಡಿಸಿದ ಕೃಷ್ಣ ಕಿಣಿ ಅವರನ್ನು ನೆನಪಿಸುವ ಕಾರ್ಯ ಅವರ ಊರಿನಲ್ಲಿ ನಡೆಯುತ್ತಿರುವುದು ಉತ್ತಮ ಕಾರ್ಯ. ಅವರ ಕನಸಿನ ಮತ್ತು ಕಲ್ಪನೆಯ ಭಾರತ ದೇಶದಲ್ಲಿ ಇಂದು ದೇಶ ಭಕ್ತ ಜನ ನಾಯಕರ ಸಂಖ್ಯೆ ಹೆಚ್ಚಿದೆ. ಅವರ ತತ್ವ ಆದರ್ಶ ಎಲ್ಲರಿಗೂ ಮಾದರಿ ಎಂದರು.


ಶಿಬಿರದ ಸಂಘಟಕ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಡಾ.ವಿನಾಯಕ್ ಶೆಣೈ, ಲಕ್ಷ್ಮಣ ಕಿಣಿ, ಬಾರಕೂರು ಶಾಂತಾರಾಮ ಶೆಟ್ಟಿ , ಕಮಲಾಕ್ಷ ನಾಯಕ್, ಜ್ಞಾನ ವಸಂತ ಶೆಟ್ಟಿ, ಡಾ. ಮಹೇಶ್ ಐತಾಳ್ ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!