Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಭೋವಿ ಜನಾಂಗದವರಿಗೆ ಎಸ್ ಸಿ ಜಾತಿ ಪ್ರಮಾಣ ಪತ್ರ ನೀಡುವಂತೆ ತಹಶೀಲ್ದಾರ್ ಗೆ ಮನವಿ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ ತಾಲೂಕಿನ ಸಾೈಬರಕಟ್ಟೆ ಕೆದೂರು, ಕಾರ್ಕಳ ತಾಲೂಕಿನ ಜಾರ್ಕಳ ಕುಕ್ಕೂಂದೂರು ಭಾಗದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಕಾರ್ಮಿಕರಾಗಿ ದುಡಿಯುವ ವಡ್ಡರು (ಭೋವಿ ) ಜಾತಿಯವರು ನಮಗೆ ಎಸ್.ಸಿ ಜಾತಿ ಪ್ರಮಾಣ ಪತ್ರ ನೀಡುವಂತೆ ಮಂಗಳವಾರ ಬ್ರಹ್ಮಾವರ ತಾಲೂಕು ತಹಶೀಲ್ದಾರ ರಾಜಶೇಖರ ಮೂರ್ತಿ ಯವರಿಗೆ ಮನವಿ ನೀಡಿದರು. ಬೇರೆ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಎಸ್ ಸಿ ಎಂದು ಜಾತಿ ಪ್ರಮಾಣ ಪತ್ರ ಇದ್ದು ದಕ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಅವರೀಗೆ ಭೋವಿ ಎಂದು ಜಾತಿ ಪ್ರಮಾಣ ಪತ್ರ ನೀಡುತ್ತಿದ್ದು ತಮ್ಮ ಜನಾಂಗಕ್ಕೆ ಶಿಕ್ಷಣ ಮತ್ತು ಕೆಲವು ಸೌಲಭ್ಯದಿಂದ ವಂಚಿತರಾಗಿದ್ದೇವೆ ಎಂದು ಮನವಿಯಲ್ಲಿದೆ.


ಕಲ್ಲು ಗಣಿಯಲ್ಲಿ ಕಲ್ಲು ತೆಗೆಯಲು ಬಂದ ನಮ್ಮ ಪೂರ್ವಿಕರು 6 ತಲೆಮಾರಿನಿಂದ ಆಂಧ್ರ ಮತ್ತು ತಮಿಳು ನಾಡು ಮೂಲದಿಂದ ಕರ್ನಾಟಕಕ್ಕೆ ಬಂದು ಕೂಲಿ ಕಾರ್ಮಿಕರಾಗಿಯೇ ಇದ್ದೇವೆ. 90 ಶೇಕಡಾ ಶಿಕ್ಷಣದಿಂದ ವಂಚಿತರು ಆಗಿದ್ದೇವೆ. 2,000 ಕುಟುಂಬಗಳಿದ್ದು, ಸುಮಾರು 20,000 ಜನಸಂಖ್ಯೆ ಇದೆ. ಉನ್ನತ ಶಿಕ್ಷಣ ಪಡೆದವರೂ ಇಲ್ಲ. ಆದುದರಿಂದ ನಾವು ವಾಸ ಮಾಡುವ ಸ್ಥಳ ಪರಿಶೀಲನೆ ಮಾಡಿ ನಮ್ಮ ಆದಾಯಯ ಮತ್ತು ಜಾತಿ ಪ್ರಮಾಣ ಪತ್ರವನ್ನು ನಿಖರವಾಗಿ ನೀಡುವಂತೆ ಮನವಿಯಲ್ಲಿದೆ.
ಕರ್ನಾಟಕ ಭೋವಿ (ವಡ್ಡರ) ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ, ಖಜಾಂಚಿ ಶ್ರೀನಿವಾಸ ಇನ್ನಿತರರು ಪಧಾಧಿಕಾರಿಗಳು ಹಾಜರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!