ಉಡುಪಿ : ಬಿಜೆಪಿ ಯುವಮೋರ್ಚಾ, ಉಡುಪಿ ಜಿಲ್ಲೆ ಹಾಗೂ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ, ಉಡುಪಿ ನಗರ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ “ಯುವ ಸಂಕಲ್ಪ ಯಾತ್ರೆ” ಸೈಕಲ್ ಜಾಥಾ ನಡೆಯಿತು. ದೇಶದ ಏಕತೆ ಮತ್ತು ಸಮಗ್ರತೆ ಯುವಕರಲ್ಲಿ ದೇಶಭಕ್ತಿಯ ಮನೋಭಾವವನ್ನು ಜಾಗೃತಿಗೊಳಿಸು ಸಲುವಾಗಿ ಮಣಿಪಾಲದಿಂದ ಮಲ್ಪೆಯ ವರೆಗೆ ಸೈಕಲ್ ಜಾಥಾ ನಡೆಯಿತು. ಜಾಥಕ್ಕೆ ಸಚಿವ ಸುನಿಲ್ ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿ ಯೋಗೀಶ್ ದೇವಾಡಿಗ, ಯುವಮೋರ್ಚಾದ ಉಡುಪಿ ಜಿಲ್ಲಾಧ್ಯಕ್ಷರಾದ ರೋಶನ್ ಶೆಟ್ಟಿ,
ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.