ವರದಿ : ದಿನೇಶ್ ರಾಯಪ್ಪನಮಠ
ಉಡುಪಿ : 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯಿಂದ “ಯುವ ತಿರಂಗಾ ಯಾತ್ರ” ಸೈಕಲ್ ಜಾಥಾ ಕಾರ್ಯಕ್ರಮ ಕುಂದಾಪುರದಲ್ಲಿ ನಡೆಯುತು. ಕುಂದಾಪುರ ಶಾಸ್ತ್ರೀ ಸರ್ಕಲ್ ನಿಂದ ಹೊರಟು ಹೆದ್ದಾರಿ ಮಾರ್ಗವಾಗಿ ಕೋಟೇಶ್ವರ ಪೇಟೆಯ ಮೂಲಕ ತಿರುವು ಪಡೆದು ಕುಂದಾಪುರ ಪೇಟೆಯ ಸುತ್ತ ಸಾಗಿ ಶಾಸ್ತ್ರೀ ಸರ್ಕನಲ್ಲಿ ಪೂರ್ಣಗೊಳಿಸಲಾಯಿತು.

ಕಾರ್ಯಕ್ರಮದಲದಲಿ ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕುಂದಾಪುರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ,ಸತೀಶ್ ಪೂಜಾರಿ ವಕ್ವಾಡಿ, ನಗರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ಕಡ್ಗಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಬಂಗೇರಾ,ಸುನಿಲ್ ಖಾರ್ವಿ,ಅಭಿಷೇಕ್ ಅಂಕದಕಟ್ಟೆ, ಸುಶಾಂತ್ ಅಚ್ಲಾಡಿ,ಸುಕೇಶ್ ಕುಂದಾಪುರ, ಮಹಿಳಾ ಮೋರ್ಚಾ ಅಧ್ಯಕ್ಷೆ ರೈಪಾ ಪೈ, ಪುರಸಭೆ ಸದಸ್ಯರಾದ ಸಂತೋಷ್, ಪ್ರಭಾಕರ್, ಶೇಖರ್ ಪೂಜಾರಿ, ರತ್ನಾಕರ್, ನಗರ ಪ್ರಾಧಿಕಾರ ಅಧ್ಯಕ್ಷ ವಿಜಯ್ ಎಸ್. ಪೂಜಾರಿ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.




