ಉಡುಪಿ : ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಉತ್ತೀರ್ಣಳಾದ, ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿನಿ, ಅಂಬಿಕಾಳಿಗೆ ಶಾಲಾ ಹಳೆ ವಿದ್ಯಾರ್ಥಿ, ಪ್ರಕೃತ ಬೆಂಗಳೂರಿನಲ್ಲಿ ಐ.ಟಿ.ಸಂಸ್ಥೆ ನಡೆಸುತ್ತಿರುವ ಟಿ.ಗಿರೀಶ್ ಶೆಣೈ ಅವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಫೋನ್ ನ್ನು ನಿಟ್ಟೂರು ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಮುರಲಿ ಕಡೆಕಾರ್ ಹಸ್ತಾಂತರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಅನಸೂಯಾ, ಶಿಕ್ಷಕರುಗಳಾದ ಎಚ್.ಎನ್.ಶೃಂಗೇಶ್ವರ, ದೇವದಾಸ್ ಶೆಟ್ಟಿ, ಅಶೋಕ್, ನಮಿತಾಶ್ರೀ, ಸೀಮಾ, ಚಿನ್ನಮ್ಮ ಉಪಸ್ಥಿತರಿದ್ದರು.