Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿಯಲ್ಲಿ ಸುಸಜ್ಜಿತ ಆರ್ ಎಸ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ: ಬಸ್ ನಿಲ್ದಾಣದ ಸಮೀಪದಲ್ಲಿ ಆಗುಂಬೆ ರಸ್ತೆಯ ಅನಂತ ರೆಸಿಡೆನ್ಸಿಯ ಗ್ರೌಂಡ್ ಫ್ಲೋರ್ ನಲ್ಲಿ ಸುಸಜ್ಜಿತವಾದ ಆರ್ ಎಸ್ ಫ್ಯಾಮಿಲಿ ರೆಸ್ಟೋರೆಂಟ್ ಭಾನುವಾರ ಶುಭಾರಂಭ ಗೊಂಡಿತು. ಅರ್ಚಕ ತಾಣ ರಮೇಶ್ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಉಧ್ಯಮಿ ಮಡಾಮಕ್ಕಿ ಶಶಿಧರ ಶೆಟ್ಟಿ ಆರ್ ಎಸ್ ಫ್ಯಾಮಿಲಿ ರೆಸ್ಟೋರೆಂಟ್ ನ್ನು ಲೋಕಾರ್ಪಣೆ ಮಾಡಿದರು.

“ಗ್ರಾಹಕರ ಸಂತೃಪ್ತಿಗಾಗಿ ನಾವು ವಿಶೇಷ ಆದ್ಯತೆ ನೀಡಿದ್ದರಿಂದ ಆರ್ ಎಸ್ ಗ್ರೂಪ್ ಉದ್ಯಮ ಯಶಸ್ವಿಯಾಗಲು ಸಾಧ್ಯವಾಯಿತು. ಮುಂದೆಯೂ ನಮಗೆ ಎಲ್ಲ ರೂ ಸಹಕರಿಸಿ ಬೆಂಬಲಿಸಿ ಮುನ್ನಡೆಸಿ” ಎಂದು ಆರ್ ಎಸ್ ಸಮೂಹದ ಪುನೀತ್ ಶೆಟ್ಟಿ ಮನವಿ ಮಾಡಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

Advertisement. Scroll to continue reading.

ತುಳು ಕನ್ನಡ ಚಿತ್ರ ತಾರೆ ಲಕ್ಷ ಶೆಟ್ಟಿ, ಶೈಹೀಲ್ ರೈ ಆಗಮಿಸಿ ರೆಸ್ಟೋರೆಂಟ್ ಲೋಕಾರ್ಪಣೆ ಕಾರ್ಯಕ್ರಮ ಕ್ಕೆ ಮೆರುಗು ನೀಡಿದರು.

ಪ್ರಮುಖರಾದ ಮುದ್ರಾಡಿ ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಉದ್ಯಮಿ ಪ್ರವೀಣ್ ಬಲ್ಲಾಳ್ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು.ಆರ್ ಎಸ್ ಫ್ಯಾಮಿಲಿ ರೆಸ್ಟೋರೆಂಟ್ ಮಾಲೀಕರಾದ ಶಿವಪುರ ರಂಜಿತ್ ಶೆಟ್ಟಿ, ಪುನೀತ್ ಶೆಟ್ಟಿ ಸಹೋದರರು, ರಶ್ಮಿತಾ ಶೆಟ್ಟಿ, ಶಾಂತ ಶಂಕರ್ ಶೆಟ್ಟಿ, ಶಂಕರ್ ಶೆಟ್ಟಿ ಸೇರಿದಂತೆ ಗಣ್ಯರು, ಅಭಿಮಾನಿಗಳು, ಆರ್ ಎಸ್ ಸಮೂಹದ ನೌಕರರು, ಅಭಿಮಾನಿಗಳು ಉಪಸ್ಥಿತರಿದ್ದರು.


ಮುನಿಯಾಲು ಮಾತಿಬೆಟ್ಟು ಪ್ರಕಾಶ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!