ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಭಾರಿ ಅಲೆಯ ರಭಸಕ್ಕೆ ಸ್ವಲ್ಪ ಮಗುಚಿದ ದೋಣಿಯಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ಮೃತ ಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ.
ರಾಮ್ ದಾಸ್ ಖಾರ್ವಿ(೫೮) ಮೃತ ದುರ್ಧೈವಿ. ಭಾನುವಾರ ಬೆಳಿಗ್ಗೆ ೬ ಗಂಟೆಗೆ ನಿತಿನ್, ರಾಮಕೃಷ್ಣ, ಶಿವ, ರಾಮ ಹಾಗೂ ರಾಮ್ ದಾಸ್ ಖಾರ್ವಿ ತಾರಾಪತಿಯ ಅರಬ್ಬೀ ಸಮುದ್ರದಲ್ಲಿ ಮೀನು ಹಿಡಿಯಲು ರಾಣಿ ಬಲೆ ದೋಣಿಯಲ್ಲಿ ಹೋಗುತ್ತಿರುವಾಗ ಜೋರಾದ ಅಲೆಗೆ ದೋಣಿ ಸ್ವಲ್ಪ ಮಗುಚಿತು. ಆಗ ಆಯತಪ್ಪಿ ಸಮುದ್ರ ಬಿದ್ದ ರಾಮ್ ದಾಸ್ ಅವರನ್ನು ಮೇಲಕ್ಕೆತ್ತಿ ದಡಕ್ಕೆ ತಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರಾಮ್ ದಾಸ್ ಮೃತ ಪಟ್ಟಿದ್ದಾರೆ ಎಂಬುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
Advertisement. Scroll to continue reading.

ಬೈಂದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.
