ವರದಿ : ದಿನೇಶ್ ರಾಯಪ್ಪನಮಠ
ಕೋಟ: ಇತ್ತೀಚಿಗೆ ಕೋವಿಡ್ನಿಂದ ನಿಧನ ಹೊಂದಿದ ಕೋಟದ ರಿಕ್ಷಾ ಚಾಲಕ ವಿಜಯ ಮರಕಾಲರ ಕುಟುಂಬ ನಿರ್ವಹಣೆಗಾಗಿ ಅವರ ಪತ್ನಿ ಶಾರದ ಇವರಿಗೆ ಕೋಟ ಚಾಲಕ ಮಾಲಕ ಸಂಘ ಹಾಗೂ ಸಿಐಟಿಯೂ ಬ್ರಹ್ಮಾವರ ವತಿಯಿಂದ 28 ಸಾವಿರ ರೂ. ಮೌಲ್ಯದ ನಿಧಿಯನ್ನು ಕೋಟ ಅಂಚೆ ಕಛೇರಿಯಲ್ಲಿ ಅವರ ಪುತ್ರಿಯ ಹೆಸರಿನಲ್ಲಿ ಪ್ರಧಾನಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಬಾಂಡ್ ಅನ್ನು ಸೋಮವಾರ ಹಸ್ತಾಂತರಿಸಲಾಯಿತು.
ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ಉಪಾಧ್ಯಕ್ಷ ಶೇಖರ್ ದೇವಾಡಿಗ, ಗಜೇಂದ್ರ, ಚಂದ್ರ ಎನ್, ನಾಗರಾಜ ಜೋಗಿ, ಶಂಕರ್ ಕುಂದರ್, ತಾರಾನಾಥ ಪೂಜಾರಿ, ದಿನೇಶ್ ದೇವಾಡಿಗ, ಆನಂದ್ ಪೂಜಾರಿ, ಸಂತೋಷ್, ಗೋಪಾಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Advertisement. Scroll to continue reading.