ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕೋಟ ನಾರಾಯಣಗುರು ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 167 ಜಯಂತೋತ್ಸವ ಕಾರ್ಯಕ್ರಮ ಕೋಟ ನಾರಾಯಣ ಗುರು ಮಂದಿರಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಾರಾಯಣಗುರುಗಳಿಗೆ ವಿವಿಧ ರೀತಿಯ ಪೂಜಾ ಕೈಂಕರ್ಯವನ್ನು ನೆರವೆರಿಸಲಾಯಿತು.ಪೂಜಾ ಕಾರ್ಯವನ್ನು ನಾರಾಯಣಗುರು ಮಂದರದ ದಿನಂಪ್ರತಿ ಪೂಜಾಕರ್ತರಾದ ಸಂತೋಷ್ ಪೂಜಾರಿ,ಮನೋಹರ ಪೂಜಾರಿ ಗೈದರು.
ಸಂಘದ ಅಧ್ಯಕ್ಷ ಜಿ ಸದಾನಂದ ಪೂಜಾರಿ, ಗೌರವಾಧ್ಯಕ್ಷ ಸಿದ್ಧಿ ಶ್ರೀನಿವಾಸ ಪೂಜಾರಿ, ಪ್ರದಾನಕಾರ್ಯದರ್ಶಿ ಪ್ರಸಾದ್ ಬಿಲ್ಲವಹಿರಿಯರಾದ ತೇಜ ಪೂಜಾರಿ, ಶಿರಿಯಾರ ನರಸಿಂಹ ಪೂಜಾರಿ, ಪುಟ್ಟಣ ಪೂಜಾರಿ, ಐರೋಡಿ ವಿಠ್ಠಲ್ ಪೂಜಾರಿ, ನಾಗೇಶ್ ಪೂಜಾರಿ ಬಾಳೆಬೆಟ್ಟು, ನಾಗೇಶ್ ಪೂಜಾರಿ ಗೊಬ್ಬರಬೆಟ್ಟು, ಸುರೇಶ್ ಗಿಳಿಯಾರು, ರಾಘವೇಂದ್ರ ಪೂಜಾರಿ ಬನ್ನಾಡಿಮನೆ, ಮಹಿಳಾ ಸಂಘದ ಶೈಲಜ ಪೂಜಾರಿ, ವಿಠ್ಠಲ ಪೂಜಾರಿ ಕದ್ರಿಕಟ್ಟು ಮತ್ತಿತರರು ಉಪಸ್ಥಿತರಿದ್ದರು.
Advertisement. Scroll to continue reading.
