ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಗ್ರಾಮೀಣ ಭಾಗದವರ ತುರ್ತು ಆರೋಗ್ಯದ ಆಶಾಕಿರಣ 108 ಸೋಮವಾರ ಕೊಕ್ಕರ್ಣೆ ಬಳಿಯ ಕಾಡೂರಿನಲ್ಲಿ ಯಂತ್ರದ ಮೂಲಕ ಮರವನ್ನು ಕಡಿಯುವಾಗ ಆಕಸ್ಮಿಕವಾಗಿ ತೊಡೆ ಭಾಗಕ್ಕೆ ತಾಗಿ ಯುವಕನೋರ್ವ ಗಂಭಿರ ಸ್ಥಿತಿಯಲ್ಲಿರುವಾಗ ತಕ್ಷಣ ಸ್ಪಂದಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ನಡೆದಿದೆ.
ಕಾಡೂರು ಬಳಿಯ ವಿಷ್ಣು (36) ಯುವಕ ಮರವನ್ನು ತುಂಡು ಮಾಡುವಾಗ ಘಟನೆ ಸಂಭವಿಸಿದ್ದು ಕೂಡಲೆ ಇಲ್ಲಿನ ಸ್ಥಳಿಯರು 108 ಕರೆಮಾಡಿದ ಕೆಲವೆ ಕ್ಷಣದಲ್ಲಿ ಸದಾ ಸಿದ್ದಗೊಂಡಿರುವ ಸಿಬ್ಬಂದಿಗಳು ಬಂದ ಕಾರಣ ಬಾರೀ ರಕ್ತಸ್ರಾವವಾಗುವುದನ್ನು ನಿಯಂತ್ರಿಸಿದ್ದರು.

ಚಾಲಕ ಸೂರ್ಯಕಾಂತ್ ಮತ್ತು ಆರೋಗ್ಯ ಸಹಾಯಕ ಪ್ರಕಾಶ್ ವಾಹನದಲ್ಲಿ ಸದಾ ಸೇವೆಯಲ್ಲಿರುತ್ತಾರೆ. ಇಂದಿನ ಗಾಯಾಳು ವಿಷ್ಣುಗೆ ಜೀವಕ್ಕೆ ಏನೂ ಅಪಾಯವಾಗದೆ ಕೆಲ ಸಮಯದ ಚಿಕಿತ್ಸೆಯಲ್ಲಿ ಗುಣ ಮುಖರಾಗಲಿದ್ದಾರೆ. ಸರಕಾರದ ಈ ಯೋಜನೆ ಗ್ರಾಮೀಣ ಭಾಗದ ಅದೆಷ್ಟೋ ಜನರಿಗೆ ನೆರವಾಗುತ್ತಿದ್ದು , ತುರ್ತು ಸೇವೆಗೆ ಅಲ್ಪ ಸಂಭಳದಲ್ಲಿರುವ ಇಂತಹ ಕಾರ್ಯಕರ್ತರನ್ನು ಊರಿನ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವಂತಾಗಬೇಕು.

