ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ನಿರಂತರವಾಗಿ ೫೦ ವರ್ಷಗಳಿಂದ ಸಮಾಜಮುಖಿ ಸೇವೆ ಮಾಡುತ್ತ ಒಳ್ಳೇಯ ಬದುಕು ಸಾಧಿಸಿ ತೋರಿದ ಸಮಾಜಸೇವಕರಾದ ಧಾರ್ಮಿಕ ನೇತಾರ ಎಚ್. ಭಾಸ್ಕರ ಜೋಯಿಸ್ ಮತ್ತು ಶಾರದ ಬಿ. ಜೋಯಿಸ್ ದಂಪತಿಯನ್ನು ಗೌರವಿಸುವುದೇ ನಮಗೆ ದೊರೆತ ಸೌಭಾಗ್ಯ. ಜೋಯಿಸರು ಎಂದರೆ ನಮಗೆಲ್ಲರಿಗೂ ಅತ್ಯಂತ ಹೆಮ್ಮೆ ಎಂದು ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಉಡುಪಿ ರಾಜಶೇಖರ್ ಹೆಬ್ಬಾರ್ ಹೇಳಿದರು.
ಅವರು ಹೆಬ್ರಿಯ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ವತಿಯಿಂದ ಶನಿವಾರ ಸಮಾಜಸೇವಕರಾದ ಧಾರ್ಮಿಕ ನೇತಾರ ಎಚ್. ಭಾಸ್ಕರ ಜೋಯಿಸ್ ಮತ್ತು ಶಾರದ ಬಿ. ಜೋಯಿಸ್ ದಂಪತಿಯನ್ನು ಗೌರವಿಸಿ ಮಾತನಾಡಿದರು.
ಹೆಬ್ರಿಯ ಹೆಸರನ್ನು ಎತ್ತರಕ್ಕೆ ಏರಿಸಿದ ಹಲವರಲ್ಲಿ ಭಾಸ್ಕರ ಜೋಯಿಸ್ ಕೂಡ ಒಬ್ಬರು ಎಂದು ರಾಜಶೇಖರ ಹೆಬ್ಬಾರ್ ಅಭಿನಂದಿಸಿದರು. ರಾಘವೇಂದ್ರ ಅಡಿಗ ಮತ್ತು ಮಂಜುನಾಥ ಉಡುಪ ನೇತ್ರತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಉಡುಪಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಮುಖಂಡರಾದ ಮಂಜುನಾಥ ಉಪಾಧ್ಯ, ಸಂದೀಪ್ ಮಯ್ಯ, ಸಮಾಜಸೇವಕ ಬೈಕಾಡಿ ಮಂಜುನಾಥ ರಾವ್ ಶಿವಪುರ, ಲಕ್ಷ್ಮೀನಾರಾಯಣ ಜೋಯಿಸ್, ಪುಪ್ಪಾ ವೇಣುಗೋಪಾಲ್, ಪಾವನಾ ಎಲ್ . ಜೋಯಿಸ್, ಡಾ. ವೇಣುಗೋಪಾಲ್, ಜೋಯಿಸ್ ಸಹೋದರರು, ಬ್ರಾಹ್ಮಣ ಸಮಾಜದ ಗಣ್ಯರು ಭಾಗವಹಿಸಿದ್ದರು. ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
