Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಗಣೇಶ ಹಬ್ಬಕ್ಕೆ ದಿನಗಣನೆ; ಕೊರೋನಾ ನಡುವೆ ಗಣಪತಿ ವಿಗ್ರಹ ರಚನೆಯಲ್ಲಿ ತೊಡಗಿದ್ದಾರೆ ಕುಶಲಕರ್ಮಿಗಳು

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಕೊರೋನಾ ಮಹಾ ಮಾರಿಯಿಂದ ಹಲವಾರು ಆಚರಣೆ, ನಂಬಿಕೆ, ಉತ್ಸವ, ಪೂಜೆಗಳು ಸ್ಥಗಿತಗೊಂಡು 2 ವರ್ಷದಿಂದ ಸಾಂಕೇತಿಕವಾಗಿ ನಡೆಯುತ್ತಿವೆ. ಇದೀಗ ಚೌತಿಯ ಗಣೇಶೋತ್ಸವ ಕೂಡಾ ಯಾವ ರೀತಿಯಲ್ಲಿ ನಡೆಯಲಿದೆ ಎನ್ನುವ ಸ್ಪಷ್ಟತೆ ಇಲ್ಲದಿದ್ದರೂ ಚೌತಿಯಂದು ಪೂಜಿಸುವ ಮಣ್ಣಿನ ಗಣಪತಿ ವಿಗ್ರಹ ರಚನಾ ಕಾರ್ಯ ಮಾತ್ರ ಅನೇಕ ಕಡೆಯಲ್ಲಿ ನಡೆಯುತ್ತಿದೆ.
ಬ್ರಹ್ಮಾವರ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕಳೆದ ಕೆಲವು ದಿನದಿಂದ ಆವೆ ಮಣ್ಣನ್ನು ಹದ ಗೊಳಿಸಿದ್ದು, 25 ವರ್ಷದಿಂದ ಗಣಪತಿ ವಿಗ್ರಹ ರಚಸುತ್ತಿರುವ ವೆಂಕಟೇಶ್ ನಾಯಕ್ ಅವರು ಹಲವಾರು ಕುಶಲಕರ್ಮಿಗಳ ಜೊತೆ ಗಣಪತಿ ವಿಗ್ರಹ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬ್ರಹ್ಮಾವರ ಭಾಗದ ಕೆಲವು ಸಾರ್ವಜನಿಕ ಗಣೇಶೋತ್ಸವ ಸಂಘ – ಸಂಸ್ಥೆಗಳ ಮತ್ತು ಮನೆಯಲ್ಲಿ ಪೂಜಿಸುವ ನಾನಾ ಗಾತ್ರದ 50 ಗಣಪತಿ ರಚನೆಯಾಗುತ್ತಿದೆ.
ದೇಶ ವಿದೇಶದಲ್ಲೂ ಹಲವಾರು ವರ್ಷದಿಂದ ಮಹಾಚೌತಿಯಂದು ಮಣ್ಣಿನ ಗಣಪತಿಯನ್ನು ಪೂಜಿಸಿ ಬಳಿಕ ವಿಸರ್ಜನೆ ಮಾಡುವ ನಂಬಿಕೆಯ ವಿಘ್ನ ವಿನಾಶಕ ಗಣಪತಿ ದೇವರ ಪೂಜೆಗೆ ವಿಘ್ನ ಬರದಿರಲಿ ಎನ್ನುವ ನಂಬಿಕೆ ಭಕ್ತರದು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!