ಕಾಪು: ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದೇವಿ ಪ್ರಸಾದ್ ಬೆಳ್ಳಿಬೆಟ್ಟು ಅವರಿಗೆ ಶಿಕ್ಷಾ ರತ್ನ ಪ್ರಶಸ್ತಿ
Published
0
ಕಾಪು: ಅದಮಾರು ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದೇವಿ ಪ್ರಸಾದ್ ಬೆಳ್ಳಿಬೆಟ್ಟು ಅವರಿಗೆ ಪ್ರತಿಷ್ಠಿತ MAX LIFE ಸಂಸ್ಥೆ ಮಂಗಳೂರಿನಲ್ಲಿ ಶಿಕ್ಷಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಸಮಾಜ ಸೇವೆ ಜೊತೆ ನಿರೂಪಣೆಯಲ್ಲಿ ಸಾಮಾಜಿಕವಾಗಿ ಗುರುತಿಸಿಕೊಂಡಿರುವ ದೇವಿ ಪ್ರಸಾದ್ ದಿಕ್ಸೂಚಿ ಟಿವಿಯ ನಿರೂಪಕರು ಕೂಡ ಹೌದು.
ಈ ಸಂದರ್ಭದಲ್ಲಿ ಮಂಗಳೂರು ಸಂಸ್ಥೆಯ AADM ಪ್ರಜ್ವಲ್ ಕೋಟ್ಯಾನ್, ಆಫೀಸ್ ಮುಖ್ಯಸ್ಥ ಶ್ರೀ ಸಂದೀಪ್ ಮೆನನ್ ಮೊದಲಾದವರು ಉಪಸ್ಥಿತರಿದ್ದರು.